![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಸೂರಂಬೈಲು ಶಾಲೆಯಲ್ಲಿ ಆಚರಿಸಲಾಯಿತು. ಮಾರ್ಗದರ್ಶಕ ತರಬೇತುದಾರರಾಗಿ ಆಗಮಿಸಿದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ಶಿವ ಕುಮಾರ್ ಭಟ್ ಪಾಣಾಜೆಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಶುಭಾಶಯ ಕೋರಿ ಮಕ್ಕಳಿಗೆ ಪ್ರಾಣಾಯಾಮ ಧ್ಯಾನ ಹಾಗೂ ಯೋಗಾಭ್ಯಾಸಗಳನ್ನು ಮಾಡಿಸಿದರು. ಮುಖ್ಯಗುರುಗಳಾದ ಊರ್ಮಿಳಾ ಪ್ರಾಸ್ತಾವಿಕವಾಗಿ ಮಾತನಾಡಿ ಶುಭಹಾರೈಸಿದರು. ಸಹಶಿಕ್ಷಕರಾದ ನಾಗೇಶ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಪವಿತ್ರ, ಅತಿಥಿ ಶಿಕ್ಷಕಿ ಸುಪ್ರಿತ ಹಾಗೂ ಗೌರವ ಶಿಕ್ಷಕಿಯರಾದ ವಿದ್ಯಾಲಕ್ಷೀ, ಯಶಸ್ವಿನಿ ಸಹಕರಿಸಿದರು.