![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು : ಸವಣೂರಿನ ವಿದ್ಯಾರಶ್ಮಿಯಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸರಕಾರದ ರಚನೆಯಾಗಿದ್ದು ಅಧ್ಯಕ್ಷರಾಗಿ ದ್ವಿತೀಯ ಪಿಯುಸಿ ವ್ಯಾಣಿಜ್ಯ ವಿಭಾಗದ ಕೆ. ಯಶಸ್ವಿ ರೈ, ಉಪಾಧ್ಯಕ್ಷರಾಗಿ 10ನೇ ತರಗತಿಯ ಎಂ. ವೈಷ್ಣವಿ, ಕಾರ್ಯದರ್ಶಿಯಾಗಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಖದೀಜ ಅಝೀಲಾ ಎ. ಎಸ್., ಜತೆ ಕಾರ್ಯದರ್ಶಿಯಾಗಿ 5ನೇ ತರಗತಿಯ ಶ್ರೀಹರ್ಷ ಸಿ. ಕೆ., ಕ್ರೀಡಾ ಕಾರ್ಯದರ್ಶಿಗಳಾಗಿ ಪ. ಫೂ. ವಿಭಾಗದದಿಂದ ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದ ಪ್ರತೀಕ್ ಮತ್ತು ಶಾಲಾ ವಿಭಾಗದಿಂದ 9ನೇ ತರಗತಿಯ ಸಂಜಯ್ ವೈ. ಎಂ. ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈ, ಆಡಳಿತ ಅಧಿಕಾರಿ ಅಶ್ವಿನ್ ಶೆಟ್ಟಿ, ಪ್ರಾಂಶುಪಾಲುರುಗಳಾದ ಸೀತಾರಾಮ ಕೇವಳ ಮತ್ತು ಶಶಿಕಲಾ ಆಳ್ವ ತಿಳಿಸಿದ್ದಾರೆ.