ಉಪ್ಪಿನಂಗಡಿ: ಸೇತುವೆ ಸ್ವಚ್ಛತಾ ಶ್ರಮದಾನ

0

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿ ಸೇತುವೆಯ ಇಕ್ಕೆಲಗಳಲ್ಲಿ ಹಾಗೂ ಮಳೆ ನೀರು ಹರಿದು ಹೋಗಲು ಸೇತುವೆಯ ಮೇಲೆ ಮಾಡಲಾದ ರಂಧ್ರಗಳಲ್ಲಿ ತುಂಬಿಕೊಂಡಿದ್ದ ಮಣ್ಣು, ಕಸಕಡ್ಡಿಗಳನ್ನು ಇಲ್ಲಿನ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದವರು ಶ್ರಮದಾನದ ಮೂಲಕ ತೆರವುಗೊಳಿಸಿದರು.
ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಫಾರೂಕ್ ಝಿಂದಗಿ, ಸದಸ್ಯರಾದ ಕಲಂದರ್ ಶಾಫಿ ನೆಕ್ಕಿಲಾಡಿ, ಮಜೀದ್ ರಾಮನಗರ, ಅಝೀಝ್ ನೆಕ್ಕಿಲಾಡಿ, ಅಶ್ರಫ್ ಪಿಲಿಗೂಡು,ಸ್ಥಳೀಯರಾದ ಪಯಾಝ್ ಯು.ಟಿ., ರಶೀದ್, ನಬೀಲ್, ಅಮಾನ್, ಬಷೀರ್ ಶ್ರಮದಾನದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here