![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಇರ್ದೆ ಗ್ರಾಮದ ನೆಲ್ಯಾರ್ಣೆಯ ಸಂಗೀತ ಎನ್.ರವರು ಫಾರ್ಮಾ ಡಿ.(ಡಾಕ್ಟರ್ ಆಫ್ ಫಾರ್ಮುಸಿ)ಯಲ್ಲಿ ಆದಿಚುಂಚನಗಿರಿ ವಿಶ್ವಿವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಜೂ.11ರಂದು ವಿಶ್ವಿದ್ಯಾನಿಲಯದಲ್ಲಿ ನಡೆದ 4ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ಚಿನ್ನದ ಪದಕ ನೀಡಿ ಗೌರವಿಸಿದರು.
ಇರ್ದೆ ಗ್ರಾಮದ ನೆಲ್ಲಾರ್ಣೆ ಕೃಷಿಕ ಜಯರಾಮ ನಾಯಕ್ ಮತ್ತು ಜಯಲಕ್ಷ್ಮಿ ಪುತ್ರಿಯಾಗಿರುವ ಸಂಗೀತರವರು ದೂಮಡ್ಕ ಹಿ.ಪ್ರಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದರು. ನಂತರ ಆದಿಚುಂಚನಗಿರಿ ಕಾಲೇಜ್ ಆಫ್ ಫಾರ್ಮುಸಿಯಲ್ಲಿ ಫಾರ್ಮಾ ಡಿ ಪದವಿಯಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಪ್ರಸ್ತುತ ಇವರು ಬೆಂಗಳೂರಿನ ಹೆಚ್ಸಿಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
![](https://puttur.suddinews.com/wp-content/uploads/2024/06/4654.jpg)