ಆಭರಣ ಪ್ರಿಯರಿಗೊಂದು ಸಿಹಿಸುದ್ದಿ-ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಉಂಗುರ, ಕಿವಿಯೋಲೆಗಳ ಮೇಳ

0

ಪುತ್ತೂರು:ನೀವೂ ಚಿನ್ನಾಭರಣ ಖರೀದಿಸಬೇಕೆಂದಿದ್ದೀರಾ ? ನಿಮಗೂ ಉಂಗುರ, ಕಿವಿಯೋಲೆ ಖರೀದಿಬೇಕೆಂದಿದೆಯಾ? ಹಾಗಾದರೆ ತಡವೇಕೆ? ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್‌ನಲ್ಲಿ ಉಂಗುರ, ಕಿವಿಯೋಲೆ ಮೇಳ ಪ್ರಾರಂಭಗೊಂಡಿದ್ದು ಅತೀ ಕಡಿಮೆ ತಯಾರಿಕಾ ವೆಚ್ಚದಲ್ಲಿ ನಿಮಗಿಷ್ಟವಾದ ಉಂಗುರ, ಕಿವಿಯೋಲೆ ಖರೀದಿಸಲು ಇದು ಸಕಾಲವಾಗಿದೆ.


ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತಮ್ಮ ಎಲ್ಲ ನೆಚ್ಚಿನ ಗ್ರಾಹಕರಿಗೆ ಜು.1ರಿಂದ ಉಂಗುರ ಹಾಗೂ ಕಿವಿಯೋಲೆಗಳ ಮೇಳವನ್ನು ಪ್ರಾರಂಭಿಸಿದ್ದು ಸಂಸ್ಥೆ ಪುತ್ತೂರು, ಮೂಡಬಿದ್ರೆ, ಸುಳ್ಯ ಹಾಸನ, ಮತ್ತು ಕುಶಾಲನಗರ ಸೇರಿದಂತೆ ಎಲ್ಲಾ ಮಳಿಗೆಗಳಲ್ಲಿ ಆಯೋಜಿಸಿದೆ. ಚಿನ್ನವನ್ನು ಧರಿಸುವುದು ಸೌಂದರ್ಯದ ಸಂಕೇತವಾಗಿದೆ. ಹೂಡಿಕೆಯ ದೃಷ್ಟಿಯಿಂದ ಕೂಡಾ ಲಾಭದಾಯಕ. ಗ್ರಾಹಕರಿಗೆ ವಿವಿಧ ವಿನ್ಯಾಸಗಳ ಉಂಗುರ ಹಾಗೂ ಕಿವಿಯೋಲೆಗಳ ಅಪೂರ್ವ ಸಂಗ್ರಹ ಲಭ್ಯವಿದೆ. ಅದೇ ರೀತಿ ಯಲ್ಲೋ ಟ್ಯಾಗ್ ಆಭರಣಗಳನ್ನು ಆಯ್ಕೆಮಾಡಿ ಅತ್ಯಂತ ಕಡಿಮೆ ತಯಾರಿಕಾ ವೆಚ್ಚದಲ್ಲಿ ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


1957 ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆಯಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳು, ಲೈಟ್‌ವೈಟ್ ಆಭರಣಗಳ ವಿಶೇಷ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ. ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು ಹಾಗೂ ಮಾರಾಟದಲ್ಲಿ ಸಂಸ್ಥೆಯು ಹೆಸರುವಾಸಿಯಾಗಿದೆ.

LEAVE A REPLY

Please enter your comment!
Please enter your name here