ಕೇಸರಿ ಮಿತ್ರವೃಂದ ಕೇಸರಿನಗರ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ – ರಾಧಾಕೃಷ್ಣ ಗೌಡ, ಕಾರ್ಯದರ್ಶಿ – ಪ್ರಶಾಂತ್ ಮಿತ್ತಡ್ಕ, ಕೋಶಾಧಿಕಾರಿ- ನಿಖಿಲ್‌ ಮಡ್ಯಂಪಾಡಿ

ಬೆಟ್ಟಂಪಾಡಿ: ಇಲ್ಲಿನ ಮಿತ್ತಡ್ಕ ಕೇಸರಿನಗರ ಕೇಸರಿ‌ ಮಿತ್ರವೃಂದ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.

ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಗೌಡ ಮಿತ್ತಡ್ಕ, ಕಾರ್ಯದರ್ಶಿಯಾಗಿ ಪ್ರಶಾಂತ್ ಮಿತ್ತಡ್ಕ, ಕೋಶಾಧಿಕಾರಿಯಾಗಿ ನಿಖಿಲ್ ಮಡ್ಯಂಪಾಡಿ, ಉಪಾಧ್ಯಕ್ಷರಾಗಿ ಪ್ರವೀಣ್ ಗುರಿಯಡ್ಕ, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಮಿತ್ತಡ್ಕ ಆಯ್ಕೆಯಾದರು. 

ಜು. 21: ಏನೆಲ್ 2.0 ಕೇಸರಿ ಮಿತ್ರವೃಂದ ಆಯೋಜನೆಯಲ್ಲಿ ಜು. 21 ರಂದು ಎರಡನೇ ವರ್ಷದ ‘ಕೆಸರ್‌ಡ್ ಒಂಜಿ ದಿನ – ಏನೆಲ್ 2.0’ ಕಾರ್ಯಕ್ರಮ ನಡೆಯಲಿದ್ದು ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಿಕಟಪೂರ್ವ ಅಧ್ಯಕ್ಷ ಗಂಗಾಧರ ಎಂ.ಎಸ್. ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here