ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಚಂದ್ರಹಾಸ ಬಾಕಿಲ ಕುಟುಂಬಕ್ಕೆ ರೂ 50,000 ಚೆಕ್ ಹಸ್ತಾಂತರ

0

ಕಾಣಿಯೂರು: ಇತ್ತೀಚಿಗೆ ನಿಧನರಾದ ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾಗಿದ್ದ ಚಂದ್ರಹಾಸ ಬಾಕಿಲ ಅವರ ಕುಟುಂಬಕ್ಕೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ಡೈರಿ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಸಂಘದ ಮೂಲಕ ಮರಣ ಸ್ವಾಂತ್ವಾನ ನಿಧಿಯಿಂದ ರೂ 50,000 ನೆರವಿನ ಚೆಕ್ ನ್ನು ಚಂದ್ರಹಾಸ ಬಾಕಿಲರ ಪತ್ನಿ ರತ್ನಾವತಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ಉಪಾಧ್ಯಕ್ಷ ಕುಸುಮಾದರ ಇಡ್ಯಡ್ಕ, ನಿರ್ದೇಶಕರಾದ ಗೋಪಾಲಕೃಷ್ಣ ಬಾರೆಂಗಳ, ವಸಂತ ಪೂಜಾರಿ ದಲಾರಿ, ಗಣೇಶ ಮುಂಗ್ಲಿಮಜಲು, ವಾಸಪ್ಪ ಗೌಡ ನಾಣಿಲ, ಸದಾಶಿವ ಜತ್ತೋಡಿ, ರಾಮಚಂದ್ರ ಕೋಲ್ಪೆ, ರಾಮಣ್ಣ ಪೊನ್ನೆತ್ತಡಿ, ಕಾಂತ ಪರವ, ರಾಜೀವಿ ಬೊಮ್ಮಳಿಗೆ ಕುಸುಮಾವತಿ ಕಳ ಹಾಗೂ ಪಶು ಸಖಿ ಲೀಲಾವತಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ದಮಯಂತಿ ಮುದುವ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here