ನಾಳೆ(ಜು.13) ಪಶುಸಂಗೋಪನಾ ಇಲಾಖೆಯಿಂದ ವಿವಿಧ ಸಲವತ್ತುಗಳ ವಿತರಣೆ

0

ಪುತ್ತೂರು:ದ.ಕ ಜಿಲ್ಲಾ ಪಂಚಾಯತ್ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆಯು ಜು.13ರಂದು ಅಪರಾಹ್ನ ಶಾಸಕರ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.


ಅನುಗ್ರಹ ಯೋಜನೆಯಡಿಯಲ್ಲಿ ಮೃತಪಟ್ಟ ವಿಮೆ ರಹಿತ ಹಸುಗಳಿಗೆ ಪರಿಹಾರ ಮೊತ್ತ, ಪ.ಜಾತಿ, ಪ.ಪಂಗಡದವರಿಗೆ ಹಸು ಘಟಕದ ಮಂಜೂರಾತಿ ಪತ್ರ ಹಾಗೂ ಮೇವಿನ ಬೀಜ ವಿತರಣೆಯಾಗಲಿದೆ. ಶಾಸಕ ಅಶೋಕ್ ಕುಮಾರ್ ರೈ ಸವಲತ್ತುಗಳನ್ನು ವಿತರಿಸಲಿದ್ದಾರೆ. ಫಲಾನುಭವಿಗಳು ಭಾಗವಹಿಸುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಧರ್ಮಪಾಲ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here