ರೋಟರಿ ಪುತ್ತೂರು ಸ್ವರ್ಣ ಪದ ಪ್ರದಾನ

0

ಸ್ವರ್ಣದ ದಶಮಾನೋತ್ಸವ ಸುವರ್ಣಮಯವಾಗಲಿ-ಡಾ.ಶ್ರೀಪತಿ ರಾವ್

ಪುತ್ತೂರು: ವಿಶ್ವದಾದ್ಯಂತ ರೊಟೇರಿಯನ್ಸ್ ಸದಸ್ಯರು ಮಾಡಿರುವ ಸಮಾಜಮುಖಿ ಕಾರ್ಯಚಟುವಟಿಕೆಗಳಿಂದ ರೋಟರಿ ಗರಿಮೆ ಹೆಚ್ಚಿದೆ. ರೋಟರಿ ಕ್ಲಬ್ ಪುತ್ತೂರು ತನ್ನ ಸುವರ್ಣ ವರ್ಷದ ಸಂಭ್ರಮಾಚರಣೆಯಲ್ಲಿ ಹುಟ್ಟುಹಾಕಿದ ರೋಟರಿ ಸ್ವರ್ಣವು ಇದೀಗ ದಶಮಾನೋತ್ಸವದ ಸಂಭ್ರಮದಲ್ಲಿದ್ದು ಸಮಾಜಮುಖಿ ಚಟುವಟಿಕೆಗಳಿಂದ ಕ್ಲಬ್ ಸುವರ್ಣಮಯ ಎನಿಸಿಕೊಳ್ಳಲಿ ಎಂದು ಪದ ಪ್ರದಾನ ಅಧಿಕಾರಿ ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್‌ರವರು ಹೇಳಿದರು.


ಜು.11 ರಂದು ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯ ಎಡ್ವರ್ಡ್ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ಪದ ಪ್ರದಾನವನ್ನು ನೆರವೇರಿಸಿ ಮಾತನಾಡಿದರು. ಪುತ್ತೂರಿನ ಹಿರಿಯ ರೋಟರಿ ಕ್ಲಬ್ ಎನಿಸಿದ ರೋಟರಿ ಪುತ್ತೂರು ಪುತ್ತೂರಿಗೆ ಸುಸಜ್ಜಿತ ಬ್ಲಡ್‌ಬ್ಯಾಂಕ್, ಡಯಾಲಿಸಿಸ್ ಕೇಂದ್ರ, ಬ್ಲಡ್‌ಬ್ಯಾಂಕ್ ಆಂಬುಲೆನ್ಸ್, ಕಣ್ಣಿನ ಆಸ್ಪತ್ರೆ ಎಂಬ ಶಾಶ್ವತ ಯೋಜನೆಯನ್ನು ನೀಡಿದೆ. ಪ್ರಸ್ತುತ ವರ್ಷ ಅಂತರ್ರಾಷ್ಟ್ರೀಯ ಗ್ಲೋಬಲ್ ಗ್ರ್ಯಾಂಟ್ ಮೂಲಕ ಮೆಮೋಗ್ರಾಫಿ ಸೆಂಟರ್ ಅನ್ನು ಪರಿಚಯಿಸಲಿದೆ ಎಂದರು.


ಬದ್ಧತೆಯೊಂದಿಗೆ ಪರಿಶ್ರಮವೂ ಇದ್ದಲ್ಲಿ ನಾಯಕತ್ವ ಯಶಸ್ವಿ ಎನಿಸುವುದು-ರಂಗನಾಥ್ ಭಟ್:
ಮುಖ್ಯ ಅತಿಥಿ, ರೋಟರಿ ಪಿಡಿಜಿ ಎಂ.ರಂಗನಾಥ್ ಭಟ್ ಮಾತನಾಡಿ, ಯಾವುದೇ ಸಾಧನೆ ಮಾಡಬೇಕಾದರೆ ಮೊದಲು ಮಾನಸಿಕವಾಗಿ ಸಿದ್ಧರಿರಬೇಕು ಮಾತ್ರವಲ್ಲ ದೂರದೃಷ್ಟಿತ್ವದ ಚಿಂತನೆ ಇರಬೇಕು. ರೋಟರಿ ಸದಸ್ಯರು ನಾವೆಲ್ಲರೂ ಒಂದು ಎಂಬಂತೆ ಕೆಲಸ ಮಾಡಿದಾಗ ನಾವು ಮಾಡುವ ಯಾವುದೇ ಕಾರ್ಯಗಳು ಯಶಸ್ವಿಯತ್ತ ಸಾಗಬಲ್ಲವು. ರೋಟರಿಯಲ್ಲಿ ಯಾರೂ ಬೇಕಾದರೂ ನಾಯಕತ್ವ ವಹಿಸಬಹುದು. ಬದ್ಧತೆಯೊಂದಿಗೆ ಪರಿಶ್ರಮವೂ ಇದ್ದಲ್ಲಿ ನಾಯಕತ್ವ ಯಶಸ್ವಿ ಎನಿಸುವುದು ಎಂದರು.


ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸುರೇಶ್‌ರವರ ಚಿಂತನೆ ಶ್ಲಾಘನೀಯ-ಸೂರ್ಯನಾಥ ಆಳ್ವ:
ಗೌರವ ಅತಿಥಿ, ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಸೂರ್ಯನಾಥ ಆಳ್ವರವರು ಕ್ಲಬ್ ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು ಸಂಪಾದಕತ್ವದ ಬುಲೆಟಿನ್ ‘ಸ್ವರ್ಣ ವಿಕಾಸ’ ಅನ್ನು ಅನಾವರಣಗೊಳಿಸಿ ಮಾತನಾಡಿ, ಸರಕಾರಿ ಉದ್ಯೋಗದಲ್ಲಿದ್ದವರು ಸಮಾಜಮುಖಿ ಸೇವೆಗೆ ಸಂಘಟನೆ ಸೇರುವುದು ವಿರಳವಾದರೂ ನಿವೃತ್ತರಾದ ಬಳಿಕ ಇಂತಹ ಸೇವಾ ಸಂಘಟನೆಗೆ ಬರುವುದು ಸಹಜ. ನಾಯಕತ್ವದ ಗುಣಗಳಿದ್ದರಿಂದಲೇ ಅಧ್ಯಕ್ಷ ಸುರೇಶ್ ಪಿ.ರವರು ಓರ್ವ ಸರಕಾರಿ ಅಧಿಕಾರಿಯಾಗಿದ್ದರೂ ಉದ್ಯೋಗದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ರೋಟರಿಯ ಅಧ್ಯಕ್ಷರಾಗಿರುವುದು ಶ್ಲಾಘನೀಯ ಎಂದರು.


ತಾನೂ ಬೆಳೆದು ಸಮಾಜವನ್ನು ಬೆಳೆಸಬೇಕು-ವೆಂಕಟ್ರಮಣ ಗೌಡ ಕಳುವಾಜೆ:
ರೋಟರಿ ವಲಯ ಸೇನಾನಿ ವೆಂಕಟ್ರಮಣ ಗೌಡ ಕಳುವಾಜೆ ಮಾತನಾಡಿ, ಜನರ ಸೇವೆಯೇ ಜನಾರ್ದನನ ಸೇವೆ ಎಂಬಂತೆ ಕಳೆದ ಒಂಭತ್ತು ವರ್ಷಗಳಲ್ಲಿ ಅಧ್ಯಕ್ಷರಾಗಿ ಓಂಭತ್ತು ಮಂದಿ ರೋಟರಿ ಸ್ವರ್ಣವನ್ನು ಮುನ್ನೆಡೆಸಿದ್ದಾರೆ. ಪುತ್ತೂರಿನ ರೋಟರಿಯಲ್ಲಿ ಕೆಲಸ ಮಾಡಲು ಇರಬೇಕು ನಂಟು ಅದು ಬಿಡಿಸಲಾಗದ ಗಂಟು. ತಾನೂ ಬೆಳೆದು ಸಮಾಜವನ್ನು ಬೆಳೆಸುವುದು ರೋಟರಿಯ ಪ್ರಮುಖ ಉದ್ಧೇಶವಾಗಿದೆ ಎಂದರು.


ಅಧ್ಯಕ್ಷರು ಕ್ಲಬ್‌ನ್ನು ಹೊಸತನದತ್ತ ಕೊಂಡೊಯ್ಯುತ್ತಿದ್ದಾರೆ-ಚಿದಾನಂದ ಬೈಲಾಡಿ:
ಕ್ಲಬ್ ಜಿಎಸ್‌ಆರ್ ಚಿದಾನಂದ ಬೈಲಾಡಿ ಮಾತನಾಡಿ, ಮಗನ ಸ್ಥಾನದಲ್ಲಿರುವ ರೋಟರಿ ಸ್ವರ್ಣಗೆ ಇದೀಗ ಹತ್ತನೇ ವರ್ಷ. ರೋಟರಿ ಸ್ವರ್ಣವನ್ನು ಹುಟ್ಟು ಹಾಕಿದ ತಂದೆಯ ಸ್ಥಾನದಲ್ಲಿರುವ ರೋಟರಿ ಪುತ್ತೂರುಗೆ ಅರವತ್ತು ವರ್ಷ. ಕ್ಲಬ್ ನೂತನ ಅಧ್ಯಕ್ಷರು ನಾರಿಮಣಿಗಳಿಗೆ ಸೀರೆಯನ್ನು ಕೊಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ ಜೊತೆಗೆ ತಂಡಕ್ಕೆ ಡ್ರೆಸ್‌ಕೋಡ್ ಪ್ರಯತ್ನ, ರೋಟರಿ ಫೌಂಡೇಶನ್‌ಗೆ ಸದಸ್ಯರಿಂದ ಶೇ.ನೂರು ಪ್ರತಿಶತ ಟಿಆರ್‌ಎಫ್ ದೇಣಿಗೆ ಸಂಗ್ರಹ ಮೆಚ್ಚುವಂತಹುದು ಎಂದರು.


ಕ್ಲಬ್‌ಗೆ ಸ್ವರ್ಣ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದೆ-ಸುಂದರ್ ರೈ:
ಕ್ಲಬ್ ನಿರ್ಗಮಿತ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ ಮಾತನಾಡಿ, ರೋಟರಿ ಅಧ್ಯಕ್ಷನಾದ ಆರಂಭದಲ್ಲಿ ನಾನು ಸ್ವಲ್ಪ ಅನಾರೋಗ್ಯಕ್ಕೆ ಒಳಗಾದರೂ ನಂಬಿಕೆ, ಧೈರ್ಯ ಹಾಗೂ ಸದಸ್ಯರ ಸಹಕಾರದಿಂದ ವರ್ಷದಲ್ಲಿ ಸುಮಾರು 70ರಷ್ಟು ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿರುವುದರಿಂದ ಕ್ಲಬ್‌ಗೆ ಸ್ವರ್ಣ ಪ್ರಶಸ್ತಿ ಬಂದಿರುವುದು ಸಂತೋಷ ತಂದಿದ್ದು ಮಾತ್ರವಲ್ಲ ಧನ್ಯತಾ ಭಾವದಿಂದ ನಿರ್ಗಮಿಸುತ್ತಿದ್ದೇನೆ ಎಂದರು.


ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಶ್ರೀ ಮಹಾಲಿಂಗೇಶ್ವರ ಐಟಿಐನಲ್ಲಿ 36 ವರ್ಷ ಕಛೇರಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉಮೇಶ್ ಎಂ.ಬೆಳ್ಳಿಪ್ಪಾಡಿ, ಬಿಇ ಮೆಕಾನಿಕಲ್ ಇಂಜಿನಿಯರ್, ಏಂಜಲ್ ಬ್ರೋಕಿಂಗ್ ವೃತ್ತಿ ನಿರ್ವಹಿಸುತ್ತಿರುವ ರಾಯನ್ ಡಾಯಸ್ ಸಾಮೆತ್ತಡ್ಕ, ಮಂಗಳೂರಿನ ಮೋತಿಲಾಲ್ ಓಸ್ವಾಲ್ ಕಂಪೆನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ ಉದಯೋನ್ಮುಖ ಚಿತ್ರನಟರಾಗಿರುವ ಬ್ರಾಯನ್ ಸಿಕ್ವೇರಾ ಚಿಕ್ಕಪುತ್ತೂರು, ನ್ಯಾಯವಾದಿ ರಾಕೇಶ್ ಮಸ್ಕರೇನ್ಹಸ್ ಪರ್ಲಡ್ಕರವರುಗಳಿಗೆ ಪಿಡಿಜಿ ರಂಗನಾಥ್ ಭಟ್‌ರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಅಧಿಕೃತವಾಗಿ ಬರಮಾಡಿಕೊಂಡರು.


ಸೇವಾ ಕೊಡುಗೆ:
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ಕಂಬಳತ್ತಡ್ಡ ಅಂಗನವಾಡಿ ಕೇಂದ್ರಕ್ಕೆ ಚಯರ್ ಕೊಡುಗೆ, ಅನಾರೋಗ್ಯದಿಂದ ಬಳಲುತ್ತಿರುವ ದೇವಿಪ್ರಸಾದ್ ಎನ್‌ರವರಿಗೆ ಧನಸಹಾಯ, ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ, ಅಪಘಾತದಿಂದ ಬಳಲುತ್ತಿರುವ ಫಲಾನುಭವಿ ಬಾಲಕೃಷ್ಣರವರ ವೈದ್ಯಕೀಯ ವೆಚ್ಚಕ್ಕೆ ಧನಸಹಾಯ, ಎಕೆಎಸ್ ವಿಶ್ವಾಸ್ ಶೆಣೈರವರ ಪ್ರಾಯೋಜಕತ್ವದಲ್ಲಿ ಇರ್ದೆ ಉಪ್ಪಳಿಗೆ ಶಾಲೆಗೆ ಸ್ಪೀಕರ್ ಸಿಸ್ಟಂ ಅನ್ನು ಕೊಡುಗೆಯಾಗಿ ನೀಡಲಾಯಿತು.


ಪ್ರತಿಭಾವಂತರಿಗೆ ಅಭಿನಂದನೆ:
ಯೂತ್ ಸರ್ವಿಸ್‌ನಡಿಯಲ್ಲಿ ಎಸೆಸ್ಸಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿದ ಫಿಲೋಮಿನಾ ಪ್ರೌಢಶಾಲೆಯ ವಿದ್ಯಾರ್ಥಿ ರೋಹನ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿತ ಶೆಟ್ಟಿ, ಡಾ.ಶಿವರಾಮ ಕಾರಂತ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಪಿ ಸಿಂಚನಾ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ವಿದ್ಯಾರ್ಥಿನಿ ಬಿ.ಮೇಘ, ಸುದಾನ ವಸತಿಯುತ ಪ್ರೌಢಶಾಲೆಯ ವಿದ್ಯಾರ್ಥಿ ಕೆ.ಟಿ ಪ್ರಣಾಮ್, ರಾಮಕೃಷ್ಣ ಪ್ರೌಢಶಾಲೆಯ ಶ್ರೀಜನ್ ರೈ ಆರ್, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಿರೋಷ ರೈ ಬಿ, ಇಂಜಿನಿಯರ್ ಪರೀಕ್ಷೆಯಲ್ಲಿ ಎರಡನೇ ಟಾಪರ್ ಎನಿಸಿದ ಮಂಗಳೂರು ವಳಚ್ಚಿಲ್ ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಸ್‌ಐಟಿ)ಯ ನಿಷಾನ್ ರೈ ಎಂ.ಎರವರನ್ನು ಅಭಿನಂದಿಸಲಾಯಿತು.


ಪಿಎಚ್‌ಎಫ್ ಗೌರವ:
ಅಂತರ್ರಾಷ್ಟ್ರೀಯ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿಎಚ್‌ಎಫ್ ಪದವಿಗೆ ಭಾಜನರಾದ ಅಧ್ಯಕ್ಷ ಸುರೇಶ್ ಪಿ, ಮಾಜಿ ಅಧ್ಯಕ್ಷರಾದ ಭಾಸ್ಕರ ಕೋಡಿಂಬಾಳ, ವೆಂಕಟರಮಣ ಗೌಡ ಕಳುವಾಜೆ, ಸದಸ್ಯರಾದ ದೀಪಕ್ ಬೊಳ್ವಾರ್, ರೋಶನ್ ರೈ ಬನ್ನೂರುರವರನ್ನು ಗೌರವಿಸಲಾಯಿತು.


ಜಿಲ್ಲಾ ಪ್ರತಿನಿಧಿಗಳಿಗೆ ಅಭಿನಂದನೆ:
ರೋಟರಿ ಜಿಲ್ಲೆ 3181, ವಲಯ ಐದರಲ್ಲಿ ಆಯ್ಕೆಯಾಗಿರುವ ಕ್ಲಬ್ ಸದಸ್ಯರಾದ ಆಸ್ಕರ್ ಆನಂದ್(ಕ್ಲಬ್ ಸ್ಥಾಪಕರು), ಕೆ.ಭಾಸ್ಕರ್ ಕೋಡಿಂಬಾಳ(ವೈಸ್ ಚೇರ್ಮನ್-ಕಾನೂನು), ವಿಜಯ್ ಡಿ’ಸೋಜ (ಕ್ರೀಡೆ), ಮಹಾಬಲ ಗೌಡ(ವೈಸ್ ಚೇರ್ಮನ್-ಆರ್‌ಟಿ.ಐ, ಗ್ರಾಹಕ ಜಾಗೃತಿ, ಲೀಗಲ್ aid), ಸುಂದರ್ ರೈ ಬಲ್ಕಾಡಿ(ಝಡ್.ಸಿ, ಆರ್.ಸಿ.ಸಿ)ರವರುಗಳನ್ನು ಅಭಿನಂದಿಸಲಾಯಿತು


ನೂತನ ಅಧ್ಯಕ್ಷ ಸುರೇಶ್ ಪಿ.ರವರ ಪತ್ನಿ ಶ್ರೀಮತಿ ಶಾಲಿನಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಶೋಕ್ ಆಚಾರ್ಯ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸೆನೋರಿಟಾ ಆನಂದ್ ವಂದಿಸಿದರು. ಸದಸ್ಯರಾದ ಗಣೇಶ್ ತಡತಿಲ್, ದೀಪಕ್ ಮಿನೇಜಸ್, ವಿಜಯ್ ಡಿ’ಸೋಜ, ಆನಂದ ಮೂವಪ್ಪು, ಮೋಹನ್ ಗೌಡ ನೆರ್ಪಳ, ದೀಪಕ್ ಬೊಳ್ವಾರುರವರು ಅತಿಥಿಗಳ ಪರಿಚಯ ಮಾಡಿದರು. ನಿರ್ಗಮನ ಕಾರ್ಯದರ್ಶಿ ಸುರೇಂದ್ರ ಆಚಾರ್ಯ ವರದಿ ಮಂಡಿಸಿದರು. ಸಾರ್ಜಂಟ್ ಎಟ್ ಆರ್ಮ್ಸ್ ಸುಭಾಶ್ ರೈ ಬೆಳ್ಳಿಪ್ಪಾಡಿ, ಕ್ಲಬ್ ಸರ್ವಿಸ್ ನಿರ್ದೇಶಕ ಭಾಸ್ಕರ ಕೋಡಿಂಬಾಳ, ವೊಕೇಶನಲ್ ಸರ್ವಿಸ್ ನಿರ್ದೇಶಕ ಮಹಾಬಲ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುಧಾಕರ್ ಕೆ.ನಿಡ್ವಣ್ಣಾಯ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ದಿನೇಶ್ ಆಚಾರ್ಯರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಮಹೇಶ್ ಕೆ.ಸವಣೂರು ಹಾಗೂ ಆಶಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು.


ಗ್ರಾಮೀಣ ಪ್ರದೇಶದಲ್ಲೂ ಶಾಶ್ವತ ಯೋಜನೆ..
ನನ್ನಲ್ಲಿ ವಿಶ್ವಾಸವಿಟ್ಟು ಕ್ಲಬ್‌ನ ದಶಮಾನೋತ್ಸವ ವರ್ಷದ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಕೃತಜ್ಞತೆಗಳು. ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿ ಡಯಾಲಿಸಿಸ್ ರೋಗಿಗಳ ಮುಖದಲ್ಲಿ ಕೃತಜ್ಞತಾಭಾವವನ್ನು ನೋಡಿದಾಗ ನಾವು ರೋಟರಿಗೆ ನೀಡುವ ಟಿಆರ್‌ಎಫ್ ದೇಣಿಗೆಯು ಸಾರ್ಥಕೈ ಪಡೆಯುತ್ತದೆ. ಕ್ಲಬ್‌ನಿಂದ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಪ್ರಾಜೆಕ್ಟ್ ಅನ್ನು ಹಮ್ಮಿಕೊಳ್ಳುವ ಹಂಬಲದ ಜೊತೆಗೆ ವೈದ್ಯಕೀಯ ಶಿಬಿರದಂತಹ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಜಿಲ್ಲಾ ಗವರ್ನರ್‌ರವರ ಜಿಲ್ಲಾ ಯೋಜನೆಗಳಿಗೆ ಸಾಥ್ ನೀಡಲಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಗೌರವಿಸಿದಾಗ ಸಮಾಜವು ನಮ್ಮನ್ನು ಗುರುತಿಸುತ್ತದೆ.
-ಸುರೇಶ್ ಪಿ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸ್ವರ್ಣ

ಸೀರೆ ವಿತರಣೆ..
ನೂತನ ಅಧ್ಯಕ್ಷರಾಗಿ ಪದ ಪ್ರದಾನವನ್ನು ಸ್ವೀಕರಿಸಿದ ಸುರೇಶ್ ಪಿರವರ ಪ್ರಾಯೋಜಕತ್ವದಲ್ಲಿ ಕ್ಲಬ್‌ನಲ್ಲಿನ ಮಹಿಳಾ ರೊಟೇರಿಯನ್ಸ್‌ಗಳಿಗೆ, ಪುರುಷ ರೊಟೇರಿಯನ್ಸ್‌ಗಳ ಪತ್ನಿಯರಿಗೆ, ತಾಯಂದಿರಿಗೆ ಸೀರೆ ವಿತರಣೆ ಮಾಡಲಾಯಿತು.

ಸನ್ಮಾನ..
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಬಡಗಿ ವೃತ್ತಿ ನಿರ್ವಹಿಸುವ ಬೆಟ್ಟಂಪಾಡಿಯ ಲಿಂಗಪ್ಪ ಆಚಾರ್ಯ, ಪ್ರಗತಿಪರ ಕೃಷಿಕ ಆನಂದ ಅಮೀನ್ ಹೊಸಮನೆ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಮಚ್ಚೇಂದ್ರ ಪೆಲತ್ತಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕರಸೇವಕ ಕೆ.ಪಿ ಪ್ರಕಾಶ್, ಯೂತ್ ಸರ್ವಿಸ್‌ನಡಿಯಲ್ಲಿ ಆಸ್ಟ್ರೇಲಿಯಾದಲ್ಲಿ ಆಗಸ್ಟ್ 20ರಿಂದ ಸೆಪ್ಟೆಂಬರ್ 3ರ ವರೆಗೆ ನಡೆಯುವ ಲೈಫ್ ಸೇವಿಂಗ್ ವಿಶ್ವ ಚಾಂಪಿಯನ್‌ಶಿಪ್ 2024ರ ಭಾರತ ದೇಶದ ಪ್ರತಿನಿಧಿಯಾಗಿ ಭಾಗವಹಿಸುವ ಸ್ವೀಕೃತ್ ಆನಂದ್ ಹಾಗೂ 2023-24ನೇ ಸಾಲಿನಲ್ಲಿ ಕ್ಲಬ್ ಮುನ್ನೆಡೆಸಿದ ಅಧ್ಯಕ್ಷ ಸುಂದರ್ ರೈ ಬಲ್ಕಾಡಿ, ವಲಯ ಐದರ ಸಹಾಯಕ ಗವರ್ನರ್ ಪುರಂದರ ರೈ ಮಿತ್ರಂಪಾಡಿ, ಪುಡಾ ಅಧ್ಯಕ್ಷ ಭಾಸ್ಕರ ಕೋಡಿಂಬಾಳರವರನ್ನು ಸನ್ಮಾನಿಸಲಾಯಿತು.

ಪದ ಪ್ರದಾನ..
ನೂತನ ಅಧ್ಯಕ್ಷ ಸುರೇಶ್ ಪಿ, ಕಾರ್ಯದರ್ಶಿ ಸೆನೋರಿಟಾ ಆನಂದ್, ಕೋಶಾಧಿಕಾರಿ ವಿಜಯ್ ವಿಲ್‌ಫ್ರೆಡ್ ಡಿ’ಸೋಜ, ಉಪಾಧ್ಯಕ್ಷ ಪ್ರವೀಣ್ ರೈ ಸಾಂತ್ಯ, ಜೊತೆ ಕಾರ್ಯದರ್ಶಿ ಮೀನಾಕ್ಷಿ, ಸಾರ್ಜಂಟ್ ಎಟ್ ಆರ್ಮ್ಸ್ ಸುಭಾಶ್ ರೈ ಬೆಳ್ಳಿಪ್ಪಾಡಿ, ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಕ್ಲಬ್ ಸರ್ವಿಸ್ ನಿರ್ದೇಶಕ ಭಾಸ್ಕರ ಕೋಡಿಂಬಾಳ, ವೊಕೇಶನಲ್ ಸರ್ವಿಸ್ ನಿರ್ದೇಶಕ ಮಹಾಬಲ ಗೌಡ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸುಧಾಕರ್ ಕೆ.ನಿಡ್ವಣ್ಣಾಯ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ದಿನೇಶ್ ಆಚಾರ್ಯ, ಯೂತ್ ಸರ್ವಿಸ್ ನಿರ್ದೇಶಕ ಸುನಿಲ್ ಜಾಧವ್, ಚೇರ್‌ಮ್ಯಾನ್‌ಗಳಾದ ಸದಾನಂದ ಆಚಾರ್ಯ(ಪಲ್ಸ್ ಪೋಲಿಯೋ), ದೀಪಕ್ ಬೊಳ್ವಾರು(ಟಿಆರ್‌ಎಫ್), ಜಯಂತ್ ಶೆಟ್ಟಿ ಕಂಬಳತ್ತಡ್ಡ(ಜಿಲ್ಲಾ ಪ್ರಾಜೆಕ್ಟ್), ದೀಪಕ್ ಮಿನೇಜಸ್(ಮೆಂಬರ್‌ಶಿಪ್), ರಾಮಣ್ಣ ರೈ ಕೈಕಾರ(ಟೀಚ್), ಯಶ್ವಂತ್ ಗೌಡ ಕಾಂತಿಲ(ವಿನ್ಸ್), ಮೋಹನ್ ಗೌಡ ನೆಲಪ್ಪಾಳ್(ವೆಬ್), ಸೀತಾರಾಮ ಗೌಡ(ಸಿಎಲ್‌ಸಿಸಿ), ಶೀನಪ್ಪ ಪೂಜಾರಿ(ವಾಟರ್ ಆಂಡ್ ಸ್ಯಾನಿಟೇಶನ್), ರೋಶನ್ ರೈ ಬನ್ನೂರು(ಪಬ್ಲಿಕ್ ಇಮೇಜ್), ಗಣೇಶ್(ಪರಿಸರ), ಸನತ್ ಕುಮಾರ್ ರೈ(ರೋಟರ‍್ಯಾಕ್ಟ್)ರವರನ್ನು ಪದ ಪ್ರದಾನ ಅಧಿಕಾರಿ ಡಾ.ಶ್ರೀಪತಿ ರಾವ್‌ರವರು ಪದ ಪ್ರದಾನ ಮಾಡಿದರು.

LEAVE A REPLY

Please enter your comment!
Please enter your name here