ಸವಣೂರಿನಲ್ಲಿ ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ದಂತ ಚಿಕಿತ್ಸಾಲಯ ಶುಭಾರಂಭ

0

ಸವಣೂರು: ಸವಣೂರು ಪ್ರಾ.ಕೃ.ಪ.ಸಹಕಾರ ಸಂಘದ ಸ್ವಾಮಿ ವಿವೇಕಾನಂದ ಸಹಕಾರಿ ಸೌಧದಲ್ಲಿ ಜು.14ರಂದು ಡೆಂಟಲ್ ಸ್ಪೆಷಾಲಿಟಿ ಕ್ಲಿನಿಕ್ ದಂತ ಚಿಕಿತ್ಸಾಲಯ ಶುಭಾರಂಭಗೊಂಡಿತು.ಸವಣೂರು ವಿದ್ಯಾರಶ್ಮಿ ಸಮೂಹಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈ ಅವರು ದೀಪ ಬೆಳಗಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸವಣೂರು ಪ್ರಾ. ಕೃ.ಪ.ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು,ನಿರ್ದೇಶಕರಾದ ಶಿವಪ್ರಸಾದ್ ಕಳುವಾಜೆ, ಉದ್ಯಮಿ ವಿಜಯ ಕುಮಾರ್ ಸೊರಕೆ, ಸವಣೂರು ಗ್ರಾ.ಪಂ.ಸದಸ್ಯರಾದ ರಫೀಕ್ ಎಂ.ಎ.,ರಾಜೀವಿ ಶೆಟ್ಟಿ, ಚಂದ್ರಾವತಿ ಸುಣ್ಣಾಜೆ,ಸುಳ್ಯ ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಆನಂದ ಖಂಡಿಗ,ಕಡಬ ತಾಲೂಕು ಸಾಹಿತ್ಯ ಪರೊಷತ್ ‌ನ ಮಾಜಿ ಅಧ್ಯಕ್ಷ ಜನಾರ್ಧನ ಗೌಡ, ಸಂಸ್ಥೆಯ ಡಾ.ಮೇಘಶ್ರೀ ಕೆ.,ಹೇಮಂತ್ ಡಿ.ವಿ.,ಸುಶೀಲಾ ವಾಚಣ್ಣ ಗೌಡ ಮುರುಳ್ಯ ,ವಿಜಯಲಕ್ಷ್ಮಿ ,ವಿನೋದ್ ಪೂವಪ್ಪ ಡಿ.ವಿ.ದೇವಶ್ಯ ತರವಾಡು ಮನೆ ಎಡಮಂಗಲ,ರತ್ನಾವತಿ ,ಶಿವರಾಮ ಕೇರ್ಪಳ ಸುಳ್ಯ ಮೊದಲಾದವರಿದ್ದರು.ಸವಣೂರು ಪ್ರಾ.ಕೃ.ಪ.ಸ.ಸಂಘದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಿ.ಕಾರ್ಯಕ್ರಮ ನಿರೂಪಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಭೇಟಿ
ಸಂಸ್ಥೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here