ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡರವರ ಅಧ್ಯಕ್ಷತೆಯಲ್ಲಿ ಹೊಸಮಜಲು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.

ಕಡಬ ಯೋಜನಾ ಕಚೇರಿಯ ಪ್ರಬಂಧಕರಾದ ಸುಜಾತರವರು ಮಾತನಾಡಿ, ವಾರದ ಸಭೆಯನ್ನು ಉತ್ತಮ ರೀತಿಯಲ್ಲಿ ನಡೆಸುವಂತೆ ಹಾಗೂ ವಾರದ ಹಣ ಸಂಗ್ರಹಣೆ ಮಾಡಲು ಹೋಗುವ ಸಂದರ್ಭದಲ್ಲಿ ಸದಸ್ಯರ ಬೆರಳಚ್ಚು ನೀಡಬೇಕಾಗುತ್ತದೆ. ಹಾಗಾಗಿ ತಂಡದ ಸದಸ್ಯರೇ ಆದಷ್ಟು ಹೋಗುವಂತೆ ನೋಡಿಕೊಳ್ಳಿ ಎಂದು ಹೇಳಿದರು. ಸೇವಾ ಪ್ರತಿನಿಧಿ ನಮಿತಾ ಎಸ್ ಶೆಟ್ಟಿ, ನೆಲ್ಯಾಡಿ ವಲಯ ಶೌರ್ಯ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು, ಒಕ್ಕೂಟದ ಪದಾಧಿಕಾರಿಗಳಾದ ಕೃಷ್ಣ ಎಂ, ಹೇಮಲತಾ, ಹೇಮಾ ವಿ, ಹೇಮಾವತಿ ಉಪಸ್ಥಿತರಿದ್ದರು. ದಾಖಲಾತಿ ಸಮಿತಿ ಸದಸ್ಯರು, ಉಪಸಮಿತಿ ಸದಸ್ಯರು, ಎಲ್ಲಾ ತಂಡಗಳ ಪ್ರಬಂಧಕರು, ಸಂಯೋಜಕರು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ಜವಾಬ್ದಾರಿಯನ್ನು ದುರ್ಗಾಪರಮೇಶ್ವರೀ ಮತ್ತು ಸುಮುಖ ತಂಡದವರು ವಹಿಸಿಕೊಂಡಿದ್ದರು. ದುರ್ಗಾಪರಮೇಶ್ವರೀ ತಂಡದ ಸದಸ್ಯರಾದ ಭಾರತಿ ಸ್ವಾಗತಿಸಿ ಸುಮುಖ ತಂಡದ ದೇವಕಿ ವಂದಿಸಿದರು.

ಅಪಘಾತ ವಿಮೆ ಪರಿಹಾರದ ಚೆಕ್ ವಿತರಣೆ:
ಕೌಕ್ರಾಡಿ ಕಾರ್ಯಕ್ಷೇತ್ರದ ಅನುಗ್ರಹ ತಂಡದ ಸದಸ್ಯ ಅಬ್ದುಲ್ ಜಬ್ಬಾರ್‌ರವರು ಅಪಘಾತದಲ್ಲಿ ಮರಣ ಹೊಂದಿದ್ದು ಇವರಿಗೆ ಸಂಪೂರ್ಣ ಸುರಕ್ಷಾ ಅಪಘಾತ ವಿಮೆಯಡಿ ಮಂಜೂರಾದ ರೂ.25ಸಾವಿರದ ಚೆಕ್ಕನ್ನು ಪ್ರಬಂಧಕರಾದ ಸುಜಾತರವರು ಅಬ್ದುಲ್ ಜಬ್ಬಾರವರ ಪತ್ನಿ ಹಾಜಿರಾರವರಿಗೆ ವಿತರಿಸಿದರು.

LEAVE A REPLY

Please enter your comment!
Please enter your name here