ಪುತ್ತೂರು: ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

0

ಪುತ್ತೂರು: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗಡಿಯಾರ ಎಂಬಲ್ಲಿ ಜು.9ರಂದು ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಗಣೇಶ್ ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಜು.15ರಂದು ಮೃತಪಟ್ಟಿದ್ದಾರೆ.

ಮೃತರು ಪುದುವೆಟ್ಟು ಗ್ರಾಮದ ಬಾಜಿದಡಿ ನೋಣಯ್ಯ ಪೂಜಾರಿ – ಮೀನಾಕ್ಷಿ ದಂಪತಿ ಪುತ್ರ ಗಣೇಶ್ (39 ವ). ಟ್ಯಾಂಕರ್ ಚಾಲಕ ಮಹಮ್ಮದ್ ಆಸಿಫ್ ಎಂಬಾತ ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದು, ಈ ವೇಳೆ ಬೈಕ್‌ಗೆ ಡಿಕ್ಕಿಯಾಗಿ ಗಣೇಶ್ ರಸ್ತೆಗೆ ಎಸೆಯಲ್ಪಟ್ಟಿದ್ದರು. ಅವರನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ವಿದೇಶದಿಂದ ಪತ್ನಿ ವಾಪಸ್:
ಪತ್ನಿಯ ಮನೆ ವೇಣೂರಿನಲ್ಲಿದ್ದು, ಗಣೇಶ್ ಅಲ್ಲಿಯೇ ವಾಸವಾಗಿದ್ದರು. ಪತ್ನಿ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು, ಘಟನೆಯ ಬಳಿಕ ವಾಪಸ್ಸಾಗಿದ್ದಾರೆ.

ಮೃತರು ಪತ್ನಿ ಪೂರ್ಣಿಮಾ, ತಂದೆ, ತಾಯಿ, ಸಹೋದರ ಯಶೋಧರ, ಸಹೋದರಿ ಪ್ರಮೀಳಾರನ್ನು ಅಗಲಿದ್ದಾರೆ.ಈ ಘಟನೆಯ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here