ಪಡುಮಲೆ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಬಡಗನ್ನೂರು:  ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ  ನಡೆಯುವ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜು.14 ರಂದು ಪಡುಮಲೆ ದೇವಸ್ಥಾನದಲ್ಲಿ ನಡೆಯಿತು.ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವರ ಮುಂದೆ ಇಟ್ಟು ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 

ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು ಹಾಗೂ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಮನೋಜ್ ರೈ ಪೇರಾಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ಪೂಜಾ ಸಮಿತಿ ಗೌರವಾಧ್ಯಕ್ಷೆ  ಸುಧಾ ಎಸ್‌ ರೈ, ಕಟ್ಟಾವು, ಅಧ್ಯಕ್ಷೆ ಸವಿತಾ ಗೆಜ್ಜೆಗಿರಿ,  ಕಾರ್ಯದರ್ಶಿ ಶಂಕರಿ ಪಟ್ಟೆ,  ಗೌರವ ಸಲಹೆಗಾರ ಉದ್ಯಮಿ  ಸತೀಶ್‌ ರೈ ಕಟ್ಟಾವು,ಉಪಾಧ್ಯಕ್ಷೆ  ಸುನೀತಾ ಮೇಗಿನಮನೆ, ಜತೆಕಾರ್ಯದರ್ಶಿ  ಸುಲೋಚನಾ ನೇರ್ಲಂಪಾಡಿ,  ,ಕೋಶಾಧಿಕಾರಿ  ಶ್ರೀಮತಿ ಕನ್ನಡ್ಕ, ಸಮಿತಿ ಸದಸ್ಯರುಗಳಾದ  ಪ್ರೇಮಾ ಮೈಂದನಡ್ಕ, ಕವಿತಾ  ಪ್ರೇಮಲತಾ ಮೈಂದನಡ್ಕ, ಪಾರಿಜಾತ ಉಳಯ, ಸುಧಾ,  ಸುಜಾತಾ ಮೈಂದಡ್ಕ, ಶೋಭಾ ನೆರೆಮಜಲು,  .ನಿವೃತ್ತ ಮುಖ್ಯಗುರು ನಾರಾಯಣ ಪಾಟಾಳಿ ಪಟ್ಟೆ, ರಾಜೇಶ್ ರೈ ಮೇಗಿನಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here