ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷೆ ವೇದಾವತಿ ಎ ,ಪ್ರ.ಕಾರ್ಯದರ್ಶಿ ಭಾಗ್ಯೇಶ್ ರೈ ,ಕೋಶಾಧಿಕಾರಿ ಲ. ವತ್ಸಲಾ ಪದ್ಮನಾಭ ಶೆಟ್ಟಿ

0

ಪುತ್ತೂರು : ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಇದರ ನೂತನ ಸಾಲಿಗೆ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. 2024-25 ನೇ ಸಾಲಿನ ಅಧ್ಯಕ್ಷೆಯಾಗಿ ,ನಿವೃತ್ತ ಶಿಕ್ಷಕಿ ಲ. ವೇದಾವತಿ ಎ, ಇವರನ್ನು ಆಯ್ಕೆ ಮಾಡಲಾಯಿತು.


ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಮಾತಾ ಅಕಾಡೆಮಿಯ ಅಧ್ಯಕ್ಷ ಲ.ಭಾಗ್ಯೇಶ್ ರೈ , ಕೋಶಾಧಿಕಾರಿಯಾಗಿ ಲ. ವತ್ಸಲಾ ಪದ್ಮನಾಭ ಶೆಟ್ಟಿ ಇವರುಗಳು ಸರ್ವಾನುಮತದಿಂದ ಆಯ್ಕೆಗೊಂಡರು. ಪ್ರಥಮ ಉಪಾಧ್ಯಕ್ಷರಾಗಿ ಲ. ರವಿಪ್ರಸಾದ್ ಶೆಟ್ಟಿ, ಎರಡನೆಯ ಉಪಾಧ್ಯಕ್ಷರಾಗಿ ಲ. ಮಂಜುನಾಥ ಎಂ, ಮೂರನೆಯ ಉಪಾಧ್ಯಕ್ಷರಾಗಿ ಚಂದ್ರಶೇಖರ್ ಪಿ,
ನಿಕಟಪೂರ್ವ ಅಧ್ಯಕ್ಷರು ಮತ್ತು ಎಲ್ ಸಿ ಐ ಎಫ್ ಚೇರ್ಮೆನ್ ಆಗಿರುವ ರವೀಂದ್ರ ಪೈ , ಸರ್ವಿಸ್ ಎಕ್ಟಿವಿಟೀಸ್ ಚೇರ್ಮೇನ್ ಸುಮಿತ್ರಾ , ಮೆಂಬರ್ ಶಿಪ್ ಚೇರ್ ಮೇನ್ ಆಗಿ ಕೇಶವ ಪೂಜಾರಿ ಬೆದ್ರಾಳ , ಟೈಲ್ ಟ್ವಿಸ್ಟರ್ ಆಗಿ ಮೊಹಮ್ಮದ್ ಹನೀಫ್, ಲಯನ್ಸ್ ಟೇಮರ್ ಆಗಿ ರಂಜಿನಿ ಶೆಟ್ಟಿ ಇವರುಗಳು ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here