ಇಡ್ಕಿದು: ಭಾರೀ ಮಳೆಗೆ ಮನೆ ಕುಸಿತ-ತಪ್ಪಿದ ಭಾರೀ ಅನಾಹುತ

0

ಪುತ್ತೂರು: ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿ ನಡೆದಿದೆ.ಸಾರಮ್ಮ ಎಂಬವರಿಗೆ ಸೇರಿದ ಮನೆ ಬಾಗಶಃ ಕುಸಿತಕ್ಕೊಳಗಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.


ಸಾರಮ್ಮ ಹಾಗೂ ಅವರ ಪುತ್ರಿ ಈ ಮನೆಯಲ್ಲಿ ವಾಸವಾಗಿದ್ದು 2 ದಿನಗಳ ಹಿಂದೆ ಸಾರಮ್ಮ ಅವರ ಮಗನ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಕುಸಿತಕ್ಕೊಳಗಾಗಿರುವುದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.ಸ್ಥಳಕ್ಕೆ ಇಡ್ಕಿದು ಗ್ರಾ.ಪಂ ಗೋಕುಲ್‌ದಾಸ್ ಭಕ್ತ, ಇಡ್ಕಿದು ವಲಯ ಕಾಂಗ್ರೆಸ್ ಅಧ್ಯಕ್ಷ ನಾಸಿರ್ ಕೋಲ್ಪೆ ಭೇಟಿ ನೀಡಿದ್ದಾರೆ. ಹಕೀಂ, ಶಾಫಿ ಸೂರ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here