ಶ್ರೀ ಕೃಷ್ಣ ಶೆಣೈಯವರಿಂದ ಕೇದಾರನಾಥ ಕ್ಷೇತ್ರಕ್ಕೆ ಭೇಟಿ

0

ಉಪ್ಪಿನಂಗಡಿ: ದಕ್ಷಿಣಕಾಶಿ ಎಂದೇ ಪ್ರಖ್ಯಾತವಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವರ ಪೋಟೋವನ್ನು ದೇಶದ ಪ್ರಸಿದ್ದ ತೀರ್ಥ ಕ್ಷೇತ್ರವಾಗಿರುವ ಕೇದಾರನಾಥದ ಧಾರ್ಮಿಕ ಮುಂದಾಳು ಶ್ರೀ ಶಿವಶಂಕರಲಿಂಗಜೀ ರವರಿಗೆ ಉಪ್ಪಿನಂಗಡಿಯ ಆಧ್ಯಾತ್ಮಿಕ ಸಾಧಕ ಶ್ರೀ ಕೃಷ್ಣ ಶೆಣೈ ರವರು ಹಸ್ತಾಂತರಿಸಿ ಆಶೀರ್ವಾದವನ್ನು ಬೇಡಿದರು.


ಯುವ ಆಧ್ಯಾತ್ಮಿಕ ಸಾಧಕರಾಗಿರುವ ಕೃಷ್ಣ ಶೆಣೈಯವರು ವೃತ್ತಿಯಲ್ಲಿ ತನ್ನ ಸಹೋದರನೊಂದಿಗೆ ಪತ್ರಿಕಾ ವಿತರಕರಾಗಿಯೂ, ಪ್ರವೃತ್ತಿಯಲ್ಲಿ ಆಧ್ಯಾತ್ಮಿಕ ಕ್ಷೇತ್ರದ ಸಾಧಕರಾಗಿಯೂ ಗುರುತಿಸಲ್ಪಟ್ಟಿದ್ದಾರೆ. ಈಗಾಗಲೇ ಹಲವಾರು ಬಾರಿ ದೇಶದ ಪುಣ್ಯ ನಗರಿಗಳಿಗೆ ಯಾತ್ರೆ ಕೈಗೊಂಡಿರುವ ಇವರು, ತನ್ನೊಂದಿಗೆ ನೂರಾರು ಮಂದಿಗೂ ಯಾತ್ರಾ ಸೌಭಾಗ್ಯವನ್ನು ಒದಗಿಸುವ ಮೂಲಕ ಆಧಾತ್ಮಿಕ ಸಾಧಕರ ಬಳಗವನ್ನೇ ಹೊಂದಿದ್ದಾರೆ. ಪ್ರಸಕ್ತ ಚಾರ್ ಧಾಮ ಯಾತ್ರೆ, ಅಮಾರನಾಥ ಯಾತ್ರೆ ಯನ್ನು ಕೈಗೊಂಡಿರುವ ಇವರು, ಗುರುವಾರದಂದು ಹಿಮಾಲಯದ ದ್ವಿತೀಯ ಕೇದಾರ ಶ್ರೀ ಮಧ್ಯಮಹೇಶ್ವರ ಧಾಮವನ್ನು ಸಂದರ್ಶಿಸಿದ್ದಾರೆ.

LEAVE A REPLY

Please enter your comment!
Please enter your name here