ಸಬಳೂರು: ಶ್ರೀರಾಮ ಭಜನಾಮಂದಿರದ ವಠಾರದಲ್ಲಿ ಗಿಡ ನಾಟಿ

0

ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀರಾಮ ಭಜನಾ ಮಂದಿರದ ವಠಾರದಲ್ಲಿ ಶ್ರೀರಾಮ ಗೆಳೆಯರ ಬಳಗದ ಸದಸ್ಯರಿಂದ ಗಿಡ ನಾಟಿ ಕಾರ್ಯಕ್ರಮ ಜು.21ರಂದು ನಡೆಯಿತು.

ದಿನೇಶ್ ಬುಡಲೂರು ಅವರು ಗಿಡ ಕೊಟ್ಟು ಸಹಕರಿಸಿದರು. ಕಾರ್ಯಕ್ರಮದಲ್ಲಿ ಕೊಯಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯತೀಶ್ ಸೀಗೆತ್ತಡಿ, ಸದಸ್ಯ ಚಿದಾನಂದ ಪಾನ್ಯಾಲು, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಸಬಳೂರು, ಕಾರ್ಯದರ್ಶಿ ಗುರುಪ್ರಸಾದ್ ಪಟ್ಟೆದಮೂಲೆ, ಪದಾಧಿಕಾರಿಗಳಾದ ಭರತ್ ಓಕೆ, ಉಮೇಶ್ ಬುಡಲೂರು, ಪುರಂದರ ಓಕೆ, ಜಗದೀಶ್ ಸಬಳೂರು, ಯತಿನ್ ಪಟ್ಟೆದಮೂಲೆ, ದಿನೇಶ್ ಪಟ್ಲ, ಮನೋಜ್ ಸೀಗೆತ್ತಡಿ, ನಿತೇಶ್ ಓಕೆ, ಪುನಿತ್ ಸೀಗೆತ್ತಡಿ, ಕುಶಾಂತ್ ಬರಮೇಲು, ಯಶಶ್ ಕೊಲ್ಯ, ಕಿಶನ್ ಪಾನ್ಯಾಲು, ಗೌತಮ್ ಪಾನ್ಯಾಲು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here