ಪಾಣಾಜೆ; ಗ್ರಾಮಾಭಿವೃದ್ದಿ ಯೋಜನೆಯ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

0

ನಿಡ್ಪಳ್ಳಿ;ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬೆಟ್ಟಂಪಾಡಿ ವಲಯದ ಪಾಣಾಜೆ ಒಕ್ಕೂಟದ ವಿಷ್ಣುಮೂರ್ತಿ ಸಂಘದ ಸದಸ್ಯ ಉದಯ ಕುಮಾರ್ ರವರ ಸಹೋದರನ ಚಿಕಿತ್ಸಾ ವೆಚ್ಚಕ್ಕೆ ರೂ.  20.000, ಸಾನಿಧ್ಯ ಸ್ವಸಹಾಯ ಸಂಘದ ಸದಸ್ಯೆ ಚಿತ್ರಕಲಾರವರ ಚಿಕಿತ್ಸಾ ವೆಚ್ಚಕ್ಕೆ ರೂ.29.000 ಹಾಗೂ ಅಮೃತ ಸ್ವಸಹಾಯ ಸಂಘದ ಸದಸ್ಯೆ ಲಲಿತರವರ ಪತಿಯ ಚಿಕಿತ್ಸಾ ವೆಚ್ಚಕ್ಕೆ ಸಂಪೂರ್ಣ ಸುರಕ್ಷಾ ಯೋಜನೆಯಡಿಯಲ್ಲಿ ಮಂಜೂರಾದ ರೂ.40000 ದ ಚೆಕ್ಕನ್ನು ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ  ಸದಾಶಿವ ರೈ ಸೂರಂಬೈಲು, ಪಾಣಾಜೆ ಒಕ್ಕೂಟದ ಅಧ್ಯಕ್ಷ ಐತಪ್ಪ ನಾಯ್ಕ, ಬೆಟ್ಟಂಪಾಡಿ ವಲಯ ಮೇಲ್ವಿಚಾರಕರಾದ ಸೋಹನ್.ಜಿ ಜು.21 ರಂದು ಫಲಾನುಭವಿಗಳಿಗೆ ವಿತರಿಸಿದರು.   ಸೇವಾಪ್ರತಿನಿಧಿ ಜಯಶ್ರೀ.ಡಿ, ವಿ.ಎಲ್.ಇ ರಶ್ಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here