16 ನೇ ಬಾರಿ ಜಲ ದಿಗ್ಭಂದನಗೊಂಡ ಸಾಲ್ಮರದ ಗೂಡಂಗಡಿ!

0

ಅಂಗಡಿ ತೆರೆದಿಟ್ಟರೂ ಗ್ರಾಹಕರು ಬರುವುದಾದರೂ ಹೇಗೆ ?

ಪುತ್ತೂರು: ಪುತ್ತೂರು ಸಾಲ್ಮರ ಕೊಟೇಚಾ ಹಾಲ್ ಬಳಿಯ ಗೂಡಂಗಡಿ ಪ್ರತಿ ಮಳೆಯಲ್ಲೂ ಕೃತಕ ನೆರೆಯಿಂದಾಗಿ ಪದೇ ಪದೇ ಜಲಾವೃತಗೊಳ್ಳುತ್ತಿದ್ದು ಇದೀಗ ಮಳೆಗೆ 16 ನೇ ಬಾರಿ ಜಲಾವೃತಗೊಂಡಿದೆ. ಅಂಗಡಿ ತೆರದಿದ್ದರೂ ಜಲದಿಗ್ಭಂದನದಿಂದ ಗ್ರಾಹಕರು ಅಂಗಡಿಗೆ ಹೋಗಲು ಆಗುತ್ತಿಲ್ಲ.


ಸಾಲ್ಮರ ಸೋಮನಾಥ ಎಂಬವರಿಗೆ ಸೇರಿದ ಗೂಡಂಗಡಿಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆಯಿಂದಾಗಿ ಅಂಗಡಿಯನ್ನು ಸದಾ ಮುಚ್ಚಬೇಕಾಗುವ ಪರಿಸ್ಥಿತಿ ಬಂದಿದೆ. ಅಂಗಡಿಯ ಮುಂದಿನ ಚರಂಡಿಯಿಂದ ಮಳೆ ನೀರು ಮೋರಿಯಿಂದ ಹೋಗದೆ ಚರಂಡಿ ನೀರು ಮೇಲೇರಿ ಅಂಗಡಿಯೊಳಗೆ ನುಗ್ಗುತ್ತಿದೆ. ಜು.23 ರಂದು ಮಳೆ ಕಡಿಮೆ ಇದ್ದರಿಂದ ಮಳೆ ನೀರು ಇಳಿದಿತ್ತು. ಮಧ್ಯಾಹ್ನದ ವೇಳೆ ಮಳೆ ಬಂದ ಕಾರಣ ಮತ್ತದೇ ಸ್ಥಿತಿಯಲ್ಲಿದೆ.

LEAVE A REPLY

Please enter your comment!
Please enter your name here