ನೆಟ್ಟಣಿಗೆ ಮುಡ್ನೂರು: ಅಟೋ ರಿಕ್ಷಾ ಚಾಲಕನಿಂದ ಹಲ್ಲೆ ಅರೋಪ – ಪ್ರಕರಣ ದಾಖಲು 

0

ಪುತ್ತೂರು: ಆಟೋ ರಿಕ್ಷಾ ಚಾಲಕರೊಬ್ಬರು ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡೂರು ಗ್ರಾಮದ ವಿನೋದ್ ಕುಮಾರ್ (28ವ) ಎಂಬವರು ಹಲ್ಲೆಗೊಳಗಾದವರು. ಅಟೋ ರಿಕ್ಷಾ ಚಾಲಕ ಬ್ರಿಜೇಶ್ ಎಂಬವರು ಆಟೋ ಬಾಡಿಗೆ ವಿಚಾರದಲ್ಲಿ ತಕರಾರು ತೆಗೆದು ಬೆದರಿಕೆಯೊಡ್ಡಿದ್ದು ಜು.24 ಕ್ಕೆ ನೆಟ್ಟಣಿಗೆ ಮುಡ್ನೂರು  ಗ್ರಾಮದಲ್ಲಿರುವ  ಶನ್ಯ ವೈನ್ ಶಾಪ್ ಬಳಿ ಹಲ್ಲೆ ನಡೆಸಿದ್ದಾರೆ.ಗಾಯಗೊಂಡ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿನೋದ್ ಕುಮಾರ್ ಅವರು ದೂರು ನೀಡಿದಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ  ಕಲಂ:-126(2),115(2) ಜೊತೆಗೆ 3(5) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here