ನಿಡ್ಪಳ್ಳಿ: ರಸ್ತೆಗೆ ವಾಲಿ ನಿಂತ ಅಪಾಯಕಾರಿ ಮರ- ತೆರವುಗೊಳಿಸಲು ಸಾರ್ವಜನಿಕರ ಆಗ್ರಹ

0

ನಿಡ್ಪಳ್ಳಿ: ರೆಂಜದಿಂದ ಮುಡ್ಪಿನಡ್ಕ ಬಡಗನ್ನೂರು ಹೋಗುವ ರಸ್ತೆಯಲ್ಲಿ ಕುಕ್ಕುಪುಣಿ ಎಂಬಲ್ಲಿ ಮರವೊಂದು ರಸ್ತೆಗೆ ವಾಲಿ ನಿಂತಿದ್ದು ಅಪಾಯಕಾರಿ ಸ್ಥಿತಿಯಲ್ಲಿದೆ.ರಸ್ತೆಯ ಅಂಚಿನಲ್ಲಿರುವ ಈ  ಅಕೇಶಿಯ ಮರ ಬುಡದಿಂದ ಮಗುಚಿ ಬಿದ್ದರೆ ರಸ್ತೆಯ ಬದಿಯಲ್ಲಿ ಹಾದು ಹೋಗುವ ವಿದ್ಯುತ್ ಎಲ್.ಟಿ ಲೈನ್ ಮೇಲೆ ಬೀಳುವ ಸಂಭವ ಇದೆ.

ಅಪಾಯ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ಮರವನ್ನು ತೆರವುಗೊಳಿಸಿ ಸಾರ್ವಜನಿಕವಾಗಿ ಉಂಟಾಗುವ ಕಷ್ಟ ನಷ್ಟಗಳನ್ನು ತಪ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.ರೆಂಜದಿಂದ ಮುಡ್ಪಿನಡ್ಕದವರೆಗೂ ರಸ್ತೆ ಬದಿ ಅಲ್ಲಲ್ಲಿ ಅಪಾಯಕಾರಿ ಮರಗಳು ಇದ್ದು ಅವುಗಳನ್ನೂ ತೆರವುಗೊಳಿಸುವುದು ಒಳ್ಳೆಯದು ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.  

LEAVE A REPLY

Please enter your comment!
Please enter your name here