ದುರ್ಗಾಶ್ರೀ ಎಂಟರ್ಪ್ರೈಸಸ್ ಗೆ ಎರಡನೇ ಬಾರಿ ರಾಜ್ಯ ಮಟ್ಟದ ಕ್ವಾಲಿಟಿ ʼಅಕ್ವಿಸಿಸನ್ ಟಾಪರ್ʼ ಅವಾರ್ಡ್

0

ಪುತ್ತೂರು: ಕಳೆದ 13 ವರ್ಷಗಳಿಂದ ಪುತ್ತೂರು ಮತ್ತು ಕಡಬ ತಾಲೂಕುಗಳಿಗೆ ಏರ್ಟೆಲ್ ಡಿ.ಟಿ.ಎಚ್.ನ ಅಧಿಕೃತ ವಿತರಕರಾಗಿರುವ ದುರ್ಗಾಶ್ರೀ ಎಂಟರ್ಪ್ರೈಸಸ್ ಇವರಿಗೆ 2023-2024ನೇ ಸಾಲಿನ ಮಾರಾಟ ಮತ್ತು ಸೇವಾ ವ್ಯವಹಾರಕ್ಕಾಗಿ ನೀಡಲಾಗುವ ರಾಜ್ಯ ಮಟ್ಟದ ʼಕ್ವಾಲಿಟಿ ಅಕ್ವಿಸಿಸನ್ ಟಾಪರ್ʼ ಪ್ರಶಸ್ತಿಯು ಸತತ ಎರಡನೇ ಬಾರಿ ಲಭಿಸಿದೆ. ಈ ಪುರಸ್ಕಾರವು ಜು.24ರ ಬುಧವಾರದಂದು ಮೈಸೂರಿನಲ್ಲಿ ನಡೆದ ಏರ್ಟೆಲ್ ಡಿ ಟಿ ಎಚ್ ʼಅನ್ಮೊಲ್ ರತ್ನʼ ರಾಜ್ಯ ವಿತರಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ಮಾಲಕರಾದ ನಾಗೇಶ್ ಬಲ್ನಾಡು ಇವರಿಗೆ ಏರ್ಟೆಲ್ ಡಿಟಿಎಚ್ ನ ಕರ್ನಾಟಕ ರಾಜ್ಯ ಮುಖ್ಯಸ್ಥರಾದ ಶಶಿಕಾಂತ್ ಕೊಪ್ಪಲ್ ಪ್ರಶಸ್ತಿ ಪತ್ರ ಮತ್ತು ಟ್ರೋಪಿ ನೀಡಿ ಗೌರವಿಸಿದರು. ಸಮಾರಂಭದಲ್ಲಿ ಮಾರಾಟ ಮತ್ತು ಸೇವಾ ವಿಭಾಗದ ಮುಖ್ಯಸ್ಥರುಗಳಾದ ಸತ್ಯಮೂರ್ತಿ ಅವದಾನಿ, ಗುರುರಾಜ್ ಉಡುಪಿ , ವಿ.ಎಂ.ಪಾಟೀಲ್, ಮುರಾರಿ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಎಲ್ಲಾ 152 ವಿತರಕರು ಉಪಸ್ಥಿತರಿದ್ದರು. ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ವಿಮಾ ಸಲಹೆಗಾರರಾಗಿರುವ ಇವರು ನಟ, ನಿರ್ದೇಶಕರಾಗಿ ಹೆಸರಾಂತ ನಾಟಕ ತಂಡ ಸಂಸಾರ ಕಲಾವಿದೆರ್ ಇದರ ಸ್ಥಾಪಕರಾಗಿರುತ್ತಾರೆ.

LEAVE A REPLY

Please enter your comment!
Please enter your name here