ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚ್‌ನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ, ನಿವೃತ್ತ ಸೈನಿಕರಿಗೆ ಗೌರವಾರ್ಪಣೆ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯ ವ್ಯಾಪ್ತಿಗೆ ಒಳಪಟ್ಟ ನೆಲ್ಯಾಡಿ ಸಂತ ಅಲ್ಫೋನ್ಸಾ ಪುಣ್ಯ ಕ್ಷೇತ್ರದಲ್ಲಿ ಜು.26ರಂದು ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಈ ಸಂದರ್ಭ ಸೇನೆಯಲ್ಲಿ ಸೇವೆ ಸಲ್ಲಿಸಿದ 9 ಮಂದಿ ಸೈನಿಕರನ್ನು ಅಭಿನಂದಿಸಿ ಗೌರವಿಸಲಾಯಿತು.

ಭಾರತೀಯ ನೌಕ ಪಡೆಯಲ್ಲಿ ಸೇವೆ ಸಲ್ಲಿಸಿದ ನೈನಾನ್ ಓಲಿಕಲ್, ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ಜೋನ್ ಕಾರ್ಮಲ್ ಭವನ್, ಬೇಬಿ ಮಟ್ಟಮ್, ಅಲೆಕ್ಸ್ ಚೆಛಬಿತ್ತಾನಮ್, ಟೋಮಿ ಚುಂಡಯಿಲ್, ಮತ್ತಚ್ಚನ್ ವಾಯಪ್ಪಳ್ಳಿ, ಸಿಆರ್‌ಪಿಎಫ್ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ ವಿನೋದ್ ಎ.ಜೆ.,ಸಿಆರ್‌ಪಿಎಫ್ ಗಡಿ ರಕ್ಷಾ ಪಡೆಯ ಕಮಾಂಡೆಂಟ್‌ಗಳಾದ ಲಿಸ್ಸಿ ಡೊಮಿನಿಕ್, ಅನ್ನಮ್ಮ ಯೇಸುದಾಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪುತ್ತೂರು ಧರ್ಮಾಧ್ಯಕ್ಷರಾದ ಪರಮಪೂಜ್ಯ ಗೀವರ್ಗಿಸ್ ಮಾರ್ ಮಕಾರಿಯೋಸ್ ಅವರು ಸೈನಿಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸಂತ ಅಲ್ಫೋನ್ಸಾ ಚರ್ಚ್‌ನ ಧರ್ಮಗುರು ರೆ.ಫಾ.ಶಾಜಿ ಮ್ಯಾಥ್ಯು ಅವರು ಸೈನಿಕರ ಸೇವೆಯನ್ನು ಶ್ಲಾಘಿಸಿದರು.

ಸಮಾರಂಭದ ವೇಳೆ ಸಾರ್ವಜನಿಕರು ಸೈನಿಕರಿಗೆ ಗೌರವ ಸಲ್ಲಿಸಿದರು. ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್ ಪಾಲನಾ ಸಮಿತಿಯ ಅಲೆಕ್ಸ್, ಜೋಬಿನ್, ರೆ.ಫಾ.ವರ್ಗೀಸ್ ಕೈಪನಡ್ಕ, ರೆ.ಫಾ. ಬಿಜು ಜೋನ್ ಕುನ್ನತೇತ್ತ್, ಫಾ.ನೋಮಿಸ್, ಕೆ.ಎಸ್.ಎಂ.ಸಿ.ಯ ಅಧ್ಯಕ್ಷ ಶಿಬು ಪನಚಿಕ್ಕಲ್, ರಂಜನ್ ರಾಯಲ್ಸ್, ಬಿನಿಶ್ ರೊಯ್ ಕೊಳಂಗರಾತ್ತ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here