ಉಪ್ಪಿನಂಗಡಿ ಜೆಸಿಐ ಪೂರ್ವಾಧ್ಯಕ್ಷ, ಉಪನ್ಯಾಸಕ ಮೋಹನ್‌ಚಂದ್ರರವರಿಗೆ ಜೇಸಿಐ ಸಾಧನಾಶ್ರೀ ಪ್ರಶಸ್ತಿ

0

ಉಪ್ಪಿನಂಗಡಿ: ಜೇಸಿಐ ಮಂಗಳೂರು ಶ್ರೇಷ್ಠ ಘಟಕದ ಆತಿಥ್ಯದಲ್ಲಿ ಮಂಗಳೂರಿನಲ್ಲಿ ನಡೆದ ಜೇಸಿಐ ಭಾರತದ ವಲಯ ಹದಿನೈದರ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗ ಮತ್ತು ವ್ಯವಹಾರ ವಿಭಾಗದ ವೈಭವ- 2024 ಸಾಧಕ ಜೇಸಿಗಳ ಸಮಾಗಮ ಸಮ್ಮೇಳನದಲ್ಲಿ ವೃತ್ತಿ ಮತ್ತು ವ್ಯವಹಾರದಲ್ಲಿ ಅತ್ಯುತ್ತಮ ಸಾಧನೆ ಗೈದ ಸಾಧಕರಿಗೆ ಕೊಡ ಮಾಡುವ ಸಾಧನಾಶ್ರೀ ಪ್ರಶಸ್ತಿಯನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ, ಉಪ್ಪಿನಂಗಡಿ ಜೆಸಿಐ ಘಟಕದ 2022ರ ಸಾಲಿನ ಅಧ್ಯಕ್ಷ ಮತ್ತು 2023ರ ಸಾಲಿನ ವಲಯದ ಉದಕ ಪತ್ರಿಕೆಯ ಸಂಪಾದಕ ಮೋಹನ್‌ಚಂದ್ರ ತೋಟದ ಮನೆ ಅವರಿಗೆ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ., ವಲಯ ಉಪಾಧ್ಯಕ್ಷ ದೀಪಕ್ ರಾಜ್, ಪೂರ್ವವಲಯಾಧ್ಯಕ್ಷ ಮುರಳಿ ಶ್ಯಾಂ, ವಲಯ ನಿರ್ದೇಶಕ ರವಿಚಂದ್ರ ಪಾಟಾಳಿ, ಸುನಿಲ್ ಕುಮಾರ್, ಉಪ್ಪಿನಂಗಡಿ ಘಟಕದ ಅಧ್ಯಕ್ಷೆ ಲವೀನಾ ಪಿಂಟೊ, ಕಾರ್ಯದರ್ಶಿ ಸುರೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here