ವಿದ್ಯಾಮಾತಾ ಅಕಾಡೆಮಿ ಅಧ್ಯಕ್ಷ ಭಾಗ್ಯೇಶ್ ರೈರವರಿಗೆ ಜೇಸಿಐ ಝೋನ್ ವತಿಯಿಂದ ಸಾಧನಾಶ್ರೀ ಪ್ರಶಸ್ತಿ

0

ವಿದ್ಯಾಮಾತಾ ಅಕಾಡೆಮಿ ಸ್ಥಾಪಕ ಅಧ್ಯಕ್ಷ ಭಾಗ್ಯೇಶ್ ರೈ ರವರಿಗೆ ದಕ್ಷಿಣ ಕನ್ನಡ ,ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡ ಜೇಸಿಐ ಝೋನ್ 15 ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ 2024ರ ‘ವೈಭವ’ ಕಾರ್ಯಕ್ರಮದಲ್ಲಿ ಜು.28 ರಂದು ಅಂಬೇಡ್ಕರ್ ಭವನ ಊರ್ವ ಸ್ಟೋರ್ ಮಂಗಳೂರು ಇಲ್ಲಿ ಸಾಧನಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಸಮಾರಂಭದಲ್ಲಿ ಜೇಸಿಐ ವಲಯ 15ರ ವಲಯ ಅಧ್ಯಕ್ಷ JCI SEN ADV ಗಿರೀಶ್ ಎಸ್.ಪಿ ಮತ್ತು ವಲಯ ನಿರ್ದೇಶಕ ಜೇಸಿ ಸುನಿಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜೇಸಿಐ ಪುತ್ತೂರಿನ ಅಧ್ಯಕ್ಷ ಮೋಹನ್ ಕೆ, ಕಾರ್ಯದರ್ಶಿ ಆಶಾ ಮೋಹನ್ , ಜೇಸಿ ಸಂಯೋಜಕ ಶೋಭಾ ರೈ , ಜೇಸಿ ಮಾಲಿನಿ ಕಶ್ಯಪ, ಜೇಸಿ ಸತೀಶ್ ಮೊದಲಾದವರು ಉಪಸ್ಥಿತರಿದ್ದರು. ಭಾಗ್ಯೇಶ್ ರೈ ರವರು ಜೇಸಿಐ ಪುತ್ತೂರು ಇದರ ತರಬೇತಿ ವಿಭಾಗದ ಉಪಾಧ್ಯಕ್ಷರಾಗಿರುತ್ತಾರೆ.

LEAVE A REPLY

Please enter your comment!
Please enter your name here