ಬನ್ನೂರು ಕಲ್ಲಿಮಾರ್ ನಲ್ಲಿ ತೋಡಿಗೆ ಕುಸಿದ ಧರೆ – ಎರಡು ಮನೆಗಳಿಗೆ ಜಲದಿಗ್ಭಂಧನ

0

ಪುತ್ತೂರು: ಭಾರಿ ಮಳೆಗೆ ಬನ್ನೂರು ದೇವಸ್ಯದ ಕಲ್ಲಿಮಾರ್ ಎಂಬಲ್ಲಿ ಧರೆಯೊಂದು ಮಳೆ ನೀರು ಹರಿಯುವ ತೋಡಿನ ಮೇಲೆ ಬಿದ್ದ ಪರಿಣಾಮ ಪಕ್ಕದ ಎರಡು ಮನೆಗಳು ತೋಡಿನ ನೀರಿನಿಂದ ಸುತ್ತುವರಿದ ಘಟನೆ ಆ.2 ರ ನಸುಕಿನ ಜಾವ ನಡೆದಿದೆ.

ಬನ್ನೂರು ದೇವಸ್ಯ ಹಲಂಗ ಸಮೀಪದ ಕಲ್ಲಿಮಾರ್ ಎಂಬಲ್ಲಿ ಮಳೆ ನೀರು ಹರಿಯುವ ತೋಡಿಗೆ ಧರೆ ಕುಸಿತವಾಗಿದೆ. ತೋಡಿನ ನೀರಿಗೆ ಮಣ್ಣು ಬಿದ್ದ ಪರಿಣಾಮ ತೋಡಿನಲ್ಲಿ ಹರಿಯುವ ನೀರು ತನ್ನ ದಿಕ್ಕು ಬದಲಾಯಿಸಿ ಪಕ್ಕದಲ್ಲಿರುವ ಜಯಲಕ್ಷ್ಮೀ ಮತ್ತು ಬಾಬು ಗೌಡ ಅವರ ಮನೆಯಂಗಳಕ್ಕೆ ಹರಿದಿದ್ದು ಮನೆಯನ್ನು ಸುತ್ತುವರಿದಿದೆ. ತೋಡಿನ ಮಣ್ಣನ್ನು ತೆರವು ಮಾಡದಿದ್ದರೆ ಎರಡು ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here