ಕೊಟ್ಯಾಡಿಯಲ್ಲಿ ಮನೆ ಕುಸಿತ-ಶಬ್ದ ಕೇಳಿ ಹೊರಗಡೆ ಓಡಿ ಅಪಾಯದಿಂದ ಪಾರಾದ ಮನೆಮಂದಿ..!

0

ಪುತ್ತೂರು: ಭಾರೀ ಗಾಳಿ ಮಳೆಗೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೋಟ್ಯಾಡಿಯಲ್ಲಿ ಮನೆಯೊಂದು ಕುಸಿತಗೊಂಡು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಆ. 3ರಂದು ಸಂಜೆ ನಡೆದಿದೆ.

ಕೊಟ್ಯಾಡಿ ನಿವಾಸಿ ಬೀಫಾತುಮ್ಮಾ ಅವರ ಮನೆ ಭಾಗಶಃ ಕುಸಿತಕ್ಕೊಳಗಾಗಿದ್ದು ಘಟನೆಯಿಂದ ಅಪಾರ ನಷ್ಟ ಸಂಭವಿಸಿದೆ. ಬೀಫಾತುಮ್ಮಾ ಹಾಗೂ ಅವರ ಇಬ್ಬರು ಮೊಮ್ಮಕ್ಕಳು ಮನೆಯೊಳಗಿದ್ದ ವೇಳೆ ಮನೆಯ ಪಕ್ಕಾಸು ತುಂಡಾಗುವ ಶಬ್ದ ಕೇಳಿದ್ದು ಅಪಾಯದ ಸೂಚನೆ ಅರಿತ ಬೀಫಾತುಮ್ಮಾ ಅವರು ಕ್ಷಣ ಮಾತ್ರದಲ್ಲಿ ತಮ್ಮ ಇಬ್ಬರು ಮೊಮ್ಮಕ್ಕಳೊಂದಿಗೆ ಮನೆಯ ಹೊರಗೆ ಓಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ನೆಮುಡ್ನೂರು ಗ್ರಾಪಂ ಪಿಡಿಓ ಕೆ.ಪಿ ಸುಬ್ಬಯ್ಯ, ಸದಸ್ಯ ರಿಯಾಝ್, ಗ್ರಾಮ ಆಡಳಿತಾಧಿಕಾರಿ ಮಂಜುನಾಥ್ ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here