ಉಪ್ಪಿನಂಗಡಿ: ಗುಡ್ಡ ಕುಸಿತ- ತೋಟ ಜಲಾವೃತ

0

ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ ಪಟ್ಲ ಎಂಬಲ್ಲಿ ಸಂಜೀವ ರೈ ಎಂಬವರ ತೋಟದ ಬಳಿ ಇರುವ ಬೃಹತ್ ಗುಡ್ಡವೊಂದು ಜರಿದು ಪಕ್ಕದಲ್ಲಿರುವ ತೋಡಿಗೆ ಬಿದ್ದಿದ್ದು, ಇದರಿಂದ ಅಡಿಕೆ ತೋಟ ಜಲಾವೃತವಾಗಿದೆ.


ಗುಡ್ಡವು ನಿರಂತರವಾಗಿ ಕುಸಿಯುತ್ತಲೇ ಇರುವ ಕಾರಣ ಅಲ್ಲಿಗೆ ಹೋಗಿ ತೋಡಿನ ನೀರನ್ನು ಬಿಡಿಸಲು ಅಸಹಾಯಕ ಪರಿಸ್ಥಿತಿ ತಲೆದೋರಿದೆ. ವಯಸ್ಸಾದ ತನ್ನ ಹೆಂಡತಿ ಕಿಡ್ನಿ ವೈಫಲ್ಯದಿಂದಿದ್ದು, ಅವರನ್ನು ಚಿಕಿತ್ಸೆಗೆ ಕರೆದೊಯ್ಯಲು ಆಗದ ಅಸಹಾಯಕ ಸ್ಥಿತಿ ಒಂದೆಡೆಯಾದರೆ, ಈಗ ಕಣ್ಣೆದುರೇ ತೋಟ ಮುಳುಗಿದರೂ ಏನು ಮಾಡಲಾಗದೆ ಈ ಬಡ ರೈತ ಕಂಗೆಟ್ಟಿದ್ದಾರೆ. ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಜನಪ್ರತಿನಿಧಿಗಳು ಭೇಟಿ ನೀಡಿದ್ದು ಬಿಟ್ಟರೆ ತನ್ನ ಅಸಹಾಯಕ ಪರಿಸ್ಥಿತಿಯನ್ನು ಕೇಳುವವರೇ ಇಲ್ಲದಾಗಿದ್ದಾರೆ ಎಂದು ರೈತ ಸಂಜೀವ ರೈ ಅವಲತ್ತುಕೊಂಡಿದ್ದಾರೆ.

LEAVE A REPLY

Please enter your comment!
Please enter your name here