ಸುಭದ್ರ ಟ್ರೇಡರ‍್ಸ್ ಮಳಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

0

ಪುತ್ತೂರು: ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ಇತ್ತೀಚೆಗೆ ಶುಭಾರಂಭಗೊಂಡ ಪೂಜಾ ಸಾಮಾಗ್ರಿಗಳ ಮಳಿಗೆ ಸುಭದ್ರ ಟ್ರೇಡರ‍್ಸ್ ಮಳಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿ ಶುಭಹಾರೈಸಿದರು.

ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಭದ್ರ ಟ್ರೇಡರ‍್ಸ್ ಮಾಲಕರುಗಳಾದ ಭರತ್ ನೀರ್ಕಜೆ, ಪುಷ್ಪಕರ ನೀರ್ಕಜೆ, ಶೇಷಪ್ಪ ಗೌಡ ನೀರ್ಕಜೆ, ಮೀನಾಕ್ಷಿ ಶೇಷಪ್ಪ ಗೌಡರವರು ಫಲಪುಷ್ಪ, ಶಲ್ಯ ನೀಡಿ ಅಶೋಕ್ ಕುಮಾರ್ ರೈ ಮತ್ತು ಕಾವು ಹೇಮನಾಥ ಶೆಟ್ಟಿರವರನ್ನು ಸ್ವಾಗತಿಸಿ ಗೌರವಿಸಿದರು. ಕ್ರಿಸ್ತೋಫರ್ ಕಾಂಪ್ಲೆಕ್ಸ್ ಮಾಲಕ ವಲೇರಿಯನ್ ಡಯಾಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here