ಆಲಂಕಾರು ಹಾಲು ಉತ್ಪಾದಕರ ಸಂಘದ ವತಿಯಿಂದ ಆರ್ಥಿಕ ಧನಸಹಾಯ

0

ಆಲಂಕಾರು: ಆಲಂಕಾರು ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಪದ್ಮನಾಭ ಗೌಡ ಕಕ್ವೆಯವರ ಮಗ ಲಿಕಿನ್ ಕುಮಾರ್ ರವರಿಗೆ ಚಿಕಿತ್ಸಾ ವೆಚ್ಚಕ್ಕೆ ಆರ್ಥಿಕ ಧನ ಸಹಾಯ ನೀಡಲಾಯಿತು.

ಆಲಂಕಾರು ಗ್ರಾಮದ ಕಕ್ವೆ ಪದ್ಮನಾಭ ಗೌಡ ಅವರ ಮಗ ಲಿಕಿನ್ ಕುಮಾರ್ ರವರು ನಂದಿನಿ ಪಶು ಆಹಾರವನ್ನು ತಲೆಯಲ್ಲಿ ಹೊತ್ತು ಕೊಂಡು ಹೋಗುವ ಸಂಧರ್ಭದಲ್ಲಿ ಜಾರಿ ಬಿದ್ದು ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಗೆ ದಾಖಲಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರೂ ಏಳಲಾರದ ಸ್ಥಿತಿಯಲ್ಲಿದ್ದು ಇವರ ಪರಿಸ್ಥಿಯನ್ನು ಮನಗಂಡು ಸಂಘದ ವತಿಯಿಂದ 5000 ಹಾಗು ಸದಸ್ಯರಿಂದ ಸಂಗ್ರಹಿಸಿದ ಒಟ್ಟು ರೂ 23,250 ಮೊತ್ತವನ್ನು ಕಕ್ವೆ ಪದ್ಮನಾಭ ಗೌಡ ರ ಮನೆಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಾಧವ ಪೂಜಾರಿ ಕಯ್ಯಪ್ಪೆ, ಉಪಾಧ್ಯಕ್ಷ ಮುರಳೀಧರ ರೈ ಮನವಳಿಕೆ, ನಿರ್ದೇಶಕ ರಾಧಾಕೃಷ್ಣ ರೈ ಮನವಳಿಕೆ , ಹರೀಶ್ ಗೌಡ ಏಂತಡ್ಕ ,ಪ್ರಭಾರ ಕಾರ್ಯದರ್ಶಿ ಅನಿತಾ ಸದಸ್ಯರಾದ ರಾಘವ ಇಚ್ಚೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here