ಬೊಳುವಾರು : ಹಾನಿಗೊಂಡ ರಸ್ತೆ -ಆಯುಕ್ತರಿಂದ ಪರಿಶೀಲನೆ

0

ಪುತ್ತೂರು : ಜಲಸಿರಿ ಕಾಮಗಾರಿಯ ಸಂದರ್ಭದಲ್ಲಿ ಹಾನಿಗೊಂಡಿರುವ ಬೊಳುವಾರು ಮುಖ್ಯ ರಸ್ತೆ ಹಾಗೂ ಸಮೀಪದಲ್ಲೇ ಇರುವ ವಿಶ್ವಕರ್ಮ ಸಭಾಭವನ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾರ್ಡ್ ನಂ 15 ಇದರ ನಗರಸಭಾ ಸದಸ್ಯ ಸಂತೋಷ್ ಬೊಳುವಾರು ರಸ್ತೆಯನ್ನು ದುರಸ್ಥಿಗೊಳಿಸುವಂತೆ ನಗರಸಭಾ ಆಯುಕ್ತರಾದ ಮಧು ಎಸ್ ಮನೋಹರ್ ಇವರಿಗೆ ದೂರಿನ ಮೂಲಕ ಆಗ್ರಹಿಸಿದ್ದರು.


ದೂರನ್ನು ಆಲಿಸಿದ ಆಯುಕ್ತ ಮಧು ಎಸ್ ಮನೋಹರ್ ಸ್ಥಳಕ್ಕೆ ಭೇಟಿ ನೀಡಿ , ಪರಿಶೀಲನೆ ನಡೆಸಿದರು. ಬಳಿಕ ನಗರಸಭಾ ಸದಸ್ಯ ಸಂತೋಷ್ ಕುಮಾರ್ ಅವರೊಂದಿಗೆ ಮಾತನಾಡಿ ನಾದುರಸ್ಥಿಯಲ್ಲಿರುವ ರಸ್ತೆಯನ್ನು ಆದಷ್ಟು ಬೇಗನೆ ಸರಿಪಡಿಸುತ್ತೇವೆಯೆಂದು ಭರವಸೆ ನೀಡಿದರು.

LEAVE A REPLY

Please enter your comment!
Please enter your name here