ಪಾಣಾಜೆ : ಪೂಮಾಣಿ, ಪಿಲಿಭೂತ ದೈವಗಳ‌ ಗುಡಿಗೆ ದಾರಂದ ಮುಹೂರ್ತ

0

ಪಾಣಾಜೆ: ಇಲ್ಲಿನ ಕಿನ್ನಿಮಾಣಿ – ಪೂಮಾಣಿ ,ಪಿಲಿಭೂತ ದೈವಗಳ ನೂತನ ದೈವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ನಡೆಯುತ್ತಿದ್ದು, ದೈವಸ್ಥಾನದ ವಠಾರದಲ್ಲಿ ಇರುವ ಪೂಮಾಣಿ ಹಾಗೂ ಪಿಲಿಭೂತ ದೈವಗಳ 2 ಗುಡಿಗಳಿಗೆ ದಾರಂದ ಮುಹೂರ್ತ ಕಾರ್ಯಕ್ರಮ ನಡೆಯಿತು.

ಚಿತ್ರ : ಜಿ.ಎಸ್. ಹರೀಶ್ ಆರ್ಲಪದವು


ರಣಮಂಗಲ ದೇವಸ್ಥಾನದ ಅರ್ಚಕರು ದಾರಂದಗಳಿಗೆ ಪೂಜೆಯನ್ನು ‌ನೆರವೇರಿಸಿ , ನಂತರ ಮೊಕ್ತೇಸರರು ಪ್ರಾರ್ಥನೆಯನ್ನು ಮಾಡಿ ಗುಡಿಗಳಿಗೆ ದಾರಂದವನ್ನು ಇಡಲಾಯಿತು.


ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕ ಶಶಿಕುಮಾರ್ ರೈ ಬಾಲ್ಯೋಟ್ಟು,ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಜಗನ್ಮೋಹನ ರೈ, ಕಾರ್ಯದರ್ಶಿ ಶುಭಕರ ರೈ ಪಡ್ಯಂಬೆಟ್ಟು, ಉಪಾಧ್ಯಕ್ಷ ಸದಾಶಿವ ರೈ ಸೂರಂಬೈಲು, ಲಕ್ಷ್ಮೀನಾರಯಣ ರೈ ಕೆದಂಬಾಡಿ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ದಾರಂದ ಮುಹೂರ್ತ ಆದ ನಂತರ ಭಕ್ತಾದಿಗಳಿಗೆ ಲಘು ಉಪಾಹಾರ ವ್ಯವಸ್ಥೆಯನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here