ಸವಣೂರು ವಲಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಹಲವು ಬಹುಮಾನ

0

ಕಾಣಿಯೂರು: ಸವಣೂರು ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾಟವು ಕೆ ಪಿ ಎಸ್ ಕೆಯ್ಯೂರು ಶಾಲೆಯಲ್ಲಿ ಆ 7ರಂದು ನಡೆದಿದ್ದು, ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಶ್ರೀರಥ್ ವಿ ರೈ (7ನೇ ) ತೃತೀಯ ಸ್ಥಾನ, ಮಹಮ್ಮದ್ ನೂಮನ್ (6ನೇ)ನಾಲ್ಕನೇ ಸ್ಥಾನ ಮತ್ತು 8ನೇ ತರಗತಿ ಬಾಲಕರ ವಿಭಾಗದ ಶಮಂತ್ ಎನ್ (8ನೇ ಆ ಮಾ )ಪ್ರಥಮ ಸ್ಥಾನ, ಬಾಲಕಿಯರ ವಿಭಾಗದ ಸಾನ್ವಿಕ ಎಚ್ (8ನೇ ಆ ಮಾ )ಪ್ರಥಮ ಸ್ಥಾನ ಹಾಗೂ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಜನಕ್ ಆರ್ ಕೆ ( 10ನೇ ಆ ಮಾ )ಪ್ರಥಮ ಸ್ಥಾನ, ಬಾಲಕಿಯರ ವಿಭಾಗದಲ್ಲಿ ನಿಶ್ಮಿತಾ ಕೆ( 10ನೇ ಆ ಮಾ )ಪ್ರಥಮ ಸ್ಥಾನ,ಧನಲಕ್ಷ್ಮೀ ಸಿ ಎಂ (10ನೇ ಆ ಮಾ)ದ್ವಿತೀಯ ಸ್ಥಾನ, ಖತಿಜತ್ ಸ್ವಫ್ವ (9ನೇ ಕ ಮಾ )ತೃತೀಯ ಸ್ಥಾನವನ್ನು ಪಡೆದು ತಾಲೂಕುಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಇವರನ್ನು ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ದಿವಿಶ್ ಮುರುಳ್ಯ, ಮುಖ್ಯಗುರುಗಳು ಮತ್ತು ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರು ಅಭಿನಂದಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿರುತ್ತಾರೆ.

LEAVE A REPLY

Please enter your comment!
Please enter your name here