ಬೆಂಗಳೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮುಕ್ರಂಪಾಡಿಯ ಪ್ರಪುಲ್ ಶೆಟ್ಟಿ

0

ಪುತ್ತೂರು: ಬಂಟ್ವಾಳದಲ್ಲಿ ವಲಯ ಅರಣ್ಯಾಧಿಕಾರಿಯಾಗಿದ್ದ ಮುಕ್ರಂಪಾಡಿ ನಿವಾಸಿ ಪಿ.ಪ್ರಪುಲ್ ಶೆಟ್ಟಿಯವರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ(ACF)ಯಾಗಿ ಪದೋನ್ನತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ.

ನಿವೃತ್ತ ಹಿರಿಯ ಗಣಿ ವಿಜ್ಞಾನಿ ಪಾಂಡೇಲುಗುತ್ತು ಪಡ್ಯೊಟ್ಟು ವಿಶ್ವನಾಥ ಶೆಟ್ಟಿ ಮತ್ತು ಪಿ‌ ಚಂದ್ರಾವತಿ ಶೆಟ್ಟಿ ಕುಡಾಲುಗುತ್ತು ದಂಪತಿ ಪುತ್ರರಾಗಿರುವ ಪ್ರಪುಲ್ ಶೆಟ್ಟಿಯವರು ಬಿ.ಎಸ್ಸಿ ಫಾರೆಸ್ಟ್ರೀಯನ್ನು ಪೊನ್ನಂಪೇಟೆ ಹಾಗೂ ಎಂ.ಎಸ್ಸಿ ಫಾರೆಸ್ಟ್ರೀಯನ್ನು ಕೊಯಮತ್ತೂರು ನಲ್ಲಿ ಪೂರೈಸಿರುತ್ತಾರೆ. ನಂತರ ಅರಣ್ಯ ಇಲಾಖೆಗೆ ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡು ಗುಜರಾತಿನ ವಡೋದರದಲ್ಲಿ ತರಬೇತಿ ಪಡೆದಿದ್ದರು. ನಂತರ ರಾಯಚೂರು, ಕೊಡಗಿನ ಶನಿವಾರಸಂತೆಯಲ್ಲಿ ತಲಾ ಮೂರು ವರ್ಷ, ಬಳಿಕ ಬಂಟ್ವಾಳದಲ್ಲಿ 1 ಒಂದು ವರ್ಷ ಕರ್ತವ್ಯ ನಿರ್ವಹಿಸಿ ಇದೀಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮುಂಭಡ್ತಿ ಪಡೆದು ಬೆಂಗಳೂರಿಗೆ ವರ್ಗಾವಣೆಗೊಂಡು ಆ.9ರಂದು ಅಧಿಕಾರ ಸ್ವೀಕರಿಸಿದ್ದಾರೆ.

LEAVE A REPLY

Please enter your comment!
Please enter your name here