ಅಸಿಸ್ಟೆಂಟ್ ರಿಜಿಸ್ಟ್ರಾರ್ ತ್ರಿವೇಣಿ ರಾವ್ ಮತ್ತು ಬಲ್ನಾಡು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಸನ್ಮಾನ

0

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ 20 ಅಂಶಗಳ ಸಭೆಯಲ್ಲಿ ಪುತ್ತೂರು ಉಪ-ವಿಭಾಗದಲ್ಲಿ 2 ವರ್ಷಗಳಿಂದ ಸಹಕಾರ ಸಂಘಗಳ ಸಹಾಯಕ ನಿಬಂಧರಾಗಿ ಕರ್ತವ್ಯ ನಿರ್ವವಹಿಸಿ ವರ್ಗಾವಣೆಗೊಂಡ ತ್ರಿವೇಣಿ ರಾವ್ ಮತ್ತು ವಿವಿಧ ಹುದ್ದೆಗಳಲ್ಲಿ ಸುಮಾರು 41 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸಿಇಓ ಸೀತಾರಾಮ ಗೌಡ ರವರಿಗೆ ಸನ್ಮಾನ ಕಾರ್ಯಕ್ರಮ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ವಹಿಸಿ, ವರ್ಗಾವಣೆಗೊಂಡ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಂಧಕರಾದ ಜನಸ್ನೇಹಿ ಅಧಿಕಾರಿ ತ್ರಿವೇಣಿ ರಾವ್ ಮತ್ತು ಬಲ್ನಾಡಿನ ನಿವೃತ್ತರಾದ ಸಿಇಒ ಸೀತಾರಾಮ ಗೌಡ ರವರನ್ನು ಮುಖ್ಯ ಅಥಿತಿಗಳೊಂದಿಗೆ ಶಾಲು ಹೊದಿಸಿ ಫಲಪುಷ್ಪಗಳೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿ ಈರ್ವರ ಕಾರ್ಯವೈಖರಿಯನ್ನು ಅಭಿನಂದಿಸಿದರು.

ಮುಖ್ಯ ಅತಿಥಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಎಸ್.ಬಿ ಜಯರಾಮ ರೈ ಶುಭಹಾರೈಸಿದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಂ.ಎಸ್ ರಘುರವರನ್ನು ಸಭಾದ್ಯಕ್ಷರು ಹೂಗುಚ್ಚ ನೀಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರಿ ಅಭಿವೃದ್ದಿ ಅಧಿಕಾರಿ ಶೋಭ ಮತ್ತು ಪುತ್ತೂರು ಶಾಖೆಯ ವ್ಯವಸ್ಥಾಪಕ ಹರೀಶ್ ರೈ ಶುಭಹಾರೈಸಿದರು.

ಸನ್ಮಾನಿತರಾದ ವರ್ಗಾವಣೆಗೊಂಡ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ತನ್ನ ಪುತ್ತೂರಿನ ಸೇವಾವಧಿ ಅತ್ಯಂತ ತೃಪ್ತಿ ತಂದಿದ್ದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ನಿವೃತ್ತ ಸಿಇಓ ಸೀತಾರಾಮ ಗೌಡ ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸಿದರು.


ಈ ಸಮಾರಂಭದಲ್ಲಿ ಇರ್ದೆ-ಬೆಟ್ಟಂಪಾಡಿ ಸಿಇಓ ರಾಮಯ್ಯ ರೈ ಮತ್ತು ಸೀತಾರಾಮ ಗೌಡ,ಚಾರ್ವಕದ ಅಶೋಕ್ ಗೌಡ,ವಲಯ ಮೇಲ್ವಿಚಾರಕ ವಸಂತ ಎಸ್ , ಶರತ್ ಡಿ, ಪ್ರದೀಪ್ ಕೆ, ಮನೋಜ್ ಎಂ ಹಾಗೂ ಪುತ್ತೂರು ಮತ್ತು ಕಡಬ ತಾಲೂಕಿನ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ, ಮುಂಡೂರು ಸಹಕಾರಿ ಸಂಘದ ಸಿಇಓ ಜಯಪ್ರಕಾಶ್ ರೈ , ನರಿಮೊಗರು ಸಂಘದ ಮದುಕರ್ , ಆರ್ಯಾಪಿನ ಜಯಂತಿ , ಪಾಣಾಜೆಯ ಹರೀಶ್ ಭಟ್ , ಕಾವು ಸಹಕಾರ ಸಂಘದ ಸಿಇಓ ಕೇಶವ ಮೂರ್ತಿ ಕುಂಬ್ರದ ಭವಾನಿ ಬಿ.ಆರ್, ಬನ್ನೂರಿನ ರಾಧ ರೈ , ಉಪ್ಪಿನಂಗಡಿಯ ಶೋಭ , ಹೊಸಮಠದ ಸೋಮಸುಂದರ್ ಶೆಟ್ಟಿ, ಕೆದಂಬಾಡಿಯ ವಿನಯ ರೈ ,ಬಿಳಿನೆಲೆಯ ಪುನೀತ್, ಕಡಬದ ಬಾಲಕೃಷ್ಣ , ಎಡಮಂಗಲದ ರಮೇಶ್ ಬಿ , ಏನೆಕಲ್ಲಿನ ರತನ್, ಸುಬ್ರಹ್ಮಣ್ಯದ ಪ್ರಕಾಶ್ , ಆಲಂಕಾರಿನ ಮನೋಹರ್, ಉಪಸ್ಥಿತರಿದ್ದರು.

ಸವಣೂರು ಸಹಕಾರ ಸಂಘದ ಸಿಇಓ ಚಂದ್ರಶೇಖರ್ ಪಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ನೆಲ್ಯಾಡಿಯ ಸಿಇಓ ದಯಾಕರ್ ರೈ ರವರು ವಂದಿಸಿದರು.

LEAVE A REPLY

Please enter your comment!
Please enter your name here