ಮಣಿಕ್ಕರ : ತಾಲೂಕು ಮಟ್ಟದ ಪ್ರೌಢಶಾಲಾ ವಾಲಿಬಾಲ್ ಪಂದ್ಯಾಟದ ಪೂರ್ವಸಿದ್ಧತಾ ಸಭೆ 

0

ಪುತ್ತೂರು : ಕೊಳ್ತಿಗೆ ಗ್ರಾಮದ ಮಣಿಕ್ಕರ ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಲಿರುವ ಪುತ್ತೂರು ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದ ಪೂರ್ವಸಿದ್ಧತಾ ಸಭೆ ಆ.10ರಂದು ನಡೆಯಿತು. 

ಮಣಿಕ್ಕರ ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ  ಸೈಯದ್ ಗಫೂರ್ ಸಾಹೇಬ್ ಪಾಲ್ತಾಡು ಇವರು ಅಧ್ಯಕ್ಷತೆಯನ್ನು ವಹಿಸಿದ್ದರು.

ಸಭೆಯಲ್ಲಿ ಕೊಳ್ತಿಗೆ ಗ್ರಾಮಪಂಚಾಯತ್  ಸದಸ್ಯರಾದ ಶುಭಲತಾ ಜೆ ರೈ, ಸುಂದರ.ಪಿ.ಬಿ ಹಾಗೂ ಪಂದ್ಯಾಟ ಸಮಿತಿ ಅಧ್ಯಕ್ಷರಾದ  ವೆಂಕಪ್ಪ ಗೌಡ ನಾರ್ಕೋಡ್ , ಎಸ್.ಡಿ.ಎಂ.ಸಿ.ನಿಕಟಪೂರ್ವ ಕಾರ್ಯಾಧ್ಯಕ್ಷ ಸುನಿಲ್ ರೈ ಪಾಲ್ತಾಡು  , ಇಂಡಿಯನ್ ಸ್ಕೂಲ್ ಅಬುಧಾಬಿಯ ದೈಹಿಕ ಶಿಕ್ಷಣ ನಿರ್ದೇಶಕ ದಿನೇಶ್ ಎನ್. ಸುವರ್ಣ ,ಶ್ರೀ ವಿಷ್ಣುಮಿತ್ರ ವೃಂದದ ಅಧ್ಯಕ್ಷ ದೇವಿಪ್ರಸಾದ್, ನ್ಯೂ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಹನೀಫ್ ಕುಂಡಡ್ಕ ,ಮಣಿಕ್ಕರ ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಜಗನ್ನಾಥ ರೈ ಮಣಿಕ್ಕರ , ಮಣಿಕರ,ಪಂದ್ಯಾಟದ ಆಹಾರ ಸಮಿತಿ ಅಧ್ಯಕ್ಷ  ಸುಂದರ ನಾಯ್ಕ ನಾಗನ ಮಜಲು, ಪಾಲ್ತಾಡು ಶ್ರೀದೇವಿ ಕ್ರಿಕೇಟರ್ಸ್ ಅಧ್ಯಕ್ಷ ಶರತ್ ,ಶಾಲಾಭಿವೃದ್ದಿ ಸಮಿತಿ  ಸದಸ್ಯರು, ಹಿರಿಯ ವಿದ್ಯಾರ್ಥಿಗಳು,ಶಿಕ್ಷಕರು ಸಭೆಯಲ್ಲಿ ಹಾಜರಿದ್ದರು.

 ಮುಖ್ಯ ಶಿಕ್ಷಕಿ ನಳಿನಿ. ಕೆ. ಅವರು ಸ್ವಾಗತಿಸಿ ಪಂದ್ಯಾಟದ ಸಿದ್ಧತೆ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಣಿಕ್ಕರ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಕರುಣಾಕರ ಮಣಿಯಾಣಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here