ಉಪ್ಪಿನಂಗಡಿ: ಅಖಂಡ ಭಾರತ ಸಂಕಲ್ಪಕ್ಕಾಗಿ ಪಂಜಿನ ಮೆರವಣಿಗೆ

0

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪಕ್ಕಾಗಿ ಆ.13ರಂದು ರಾತ್ರಿ ಉಪ್ಪಿನಂಗಡಿಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.


ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವಠಾರದಿಂದ ಆರಂಭಗೊಂಡ ಮೆರವಣಿಗೆಯು ಗಾಂಧಿಪಾರ್ಕ್ ತನಕ ಸಾಗಿ ಶ್ರೀ ದೇವಾಲಯದ ವಠಾರಕ್ಕೆ ವಾಪಸಾಯಿತು. ಅಖಂಡ ಭಾರತ ಸಂಕಲ್ಪದ ಘೋಷಣೆಗಳನ್ನು ಕೂಗುತ್ತಾ ಭಗವಾಧ್ವಜ ಹಾಗೂ ಪಂಜನ್ನು ಕೈಯಲ್ಲಿ ಹಿಡಿದುಕೊಂಡು ಬಂದ ನೂರಾರು ಯುವಕರು ಮೆರವಣಿಗೆಯಲ್ಲಿ ಸಾಗಿ ಬಂದರು.


ಮೆರವಣಿಗೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡದ ಅಧ್ಯಕ್ಷ ಸುದರ್ಶನ್, ಅಖಾಡ ಪ್ರಮುಖ್ ಕಿಶೋರ್ ನೀರಕಟ್ಟೆ, ಪ್ರಮುಖರಾದ ಸುರೇಶ್ ಅತ್ರೆಮಜಲು, ಉಮೇಶ್ ಶೆಣೈ, ಸಂತೋಷ್ ಕುಮಾರ್ ಪಂರ್ದಾಜೆ, ಹರಿರಾಮಚಂದ್ರ, ಧನಂಜಯ ನಟ್ಟಿಬೈಲು, ವಿಶ್ವನಾಥ ಶೆಣೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಪ್ರಶಾಂತ್ ಎನ್., ಹರೀಶ್ ಡಿ., ಉಷಾ ಮುಳಿಯ, ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಚಂದ್ರಶೇಖರ ಮಡಿವಾಳ, ಮಹೇಶ್ ಬಜತ್ತೂರು, ಪೂರ್ಣಚಂದ್ರ ಕಾಂಚನ, ತಿಮ್ಮಪ್ಪ ಗೌಡ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here