ಬಿರುಮಲೆ ಬೆಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು:ಬಿರುಮಲೆ ಬೆಟ್ಟ ಅಭಿವೃದ್ದಿ ಯೋಜನೆ ಹಾಗೂ ನಿತಿನ್ ಪಕ್ಕಳ ಇವರ ನೇತೃತ್ವದ ಯುವಕ ಮಂಡಲದ ಸಹಯೋಗದೊಂದಿಗೆ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಬ್ಯಾಂಕ್ ಆಫ್ ಬರೋಡಾ ಇದರ ಪುತ್ತೂರು ಪ್ರಾದೇಶಿಕ ವಿಭಾಗದ ವ್ಯವಸ್ಥಾಪಕ ದೇವಿ ಪ್ರಸಾದ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಬೀರಮಲೆ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಜಗಜೀವನ್‌ದಾಸ್ ರೈ ಸ್ವಾಗತಿಸಿದರು. ಪ್ರೋ.ಕ್ಸೇವಿಯರ್ ಡಿಸೋಜಾ, ಸೂರ್ಯನಾಥ ಆಳ್ವ,ರೊ.ಕೃಷ್ಣ ಪ್ರಸಾದ್ ಆಳ್ವ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದರು. ಎಂ.ಎಸ್.ಅಮ್ಮಣ್ಣಾಯ,ಪ್ರೋ.ದತ್ತಾತ್ರೇಯ ರಾವ್ ದೇಶ ಭಕ್ತಿ ಗೀತೆಯನ್ನು ಹಾಡಿದರು. ಕಾರ್ಯದರ್ಶಿ ಅಮ್ಮಣ್ಣಾಯ ವಂದಿಸಿದರು. ಬಿಎಚ್‌ಡಿಪಿ ಹಾಗೂ ಯುವಕ ಮಂಡಲದ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here