ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ ಶಿಕ್ಷಕ ರಕ್ಷಕ, ಸುರಕ್ಷಾ ಸಮಿತಿಗೆ ಅಧ್ಯಕ್ಷರುಗಳಾಗಿ ವಿಶ್ವನಾಥ ಬಲ್ಯಾಯ, ಸುರೇಶ್ ಭಟ್ ಆಯ್ಕೆ

0

ಪುತ್ತೂರು: ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರ, ಶಿಶುಮಂದಿರ, ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕ ರಕ್ಷಕ ಸಂಘ ಹಾಗೂ ಶಾಲಾ ಸುರಕ್ಷತಾ ಸಮಿತಿಗಳ ಪದಾಧಿಕಾರಿಗಳ ಆಯ್ಕೆ ಪೋಷಕರ ಮಹಾಸಭೆಯಲ್ಲಿ ನಡೆಯಿತು. ಪ್ರಸಕ್ತ ಶೈಕ್ಷಣಿಕ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಬಲ್ಯಾಯ ಹಾಗೂ ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಭಟ್ ಸೂರ್ಡೇಲು ಆಯ್ಕೆಯಾದರು. ಉಪಾಧ್ಯಕ್ಷರು ಹಾಗೂ ವಸತಿ ನಿಲಯದ ಪ್ರತಿನಿಧಿಯಾಗಿ ಮಾಧವಿ, ಶಿಶುಮಂದಿರದ ಪ್ರತಿನಿಧಿಯಾಗಿ ಶ್ರುತಿ ಕೆ, ಸದಸ್ಯರಾಗಿ ಸೂರ್ಯ ನಾರಾಯಣ, ಕ್ಷಮಾ, ಪ್ರಮೀಳಾ ಎ, ರಂಗಯ್ಯ ಬಲ್ಲಾಳ್, ತೀರ್ಥರಾಮ ಎ, ವಿದ್ಯಾ ಬಿ, ವಿಶ್ವನಾಥ್ ಕೆ ವೀರಮಂಗಲ , ಸುಷ್ಮಾ ಪಡ್ಡಿಲ್ಲಾಯ ತೌಡಿಂಜ, ಕೃಷ್ಣ ಪ್ರಕಾಶ್, ರಮೇಶ್, ಗುರುವಪ್ಪ ಆಯ್ಕೆಯಾದರು. ಸಮಿತಿಯ ಪದನಿಮಿತ್ತ ಕಾರ್ಯದರ್ಶಿಯಾಗಿ ಮುಖ್ಯಗುರು ದಿವ್ಯಾ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪ್ರಾಥಮಿಕ ವಿಭಾಗದ ಮುಖ್ಯಗುರು ಲಕ್ಷ್ಮೀ ಮೊಳೆಯಾರ್ ಹಾಗೂ ಶಿಕ್ಷಕ ಪ್ರತಿನಿಧಿಗಳಾಗಿ ಜಯಂತಿ ಹಾಗೂ ರಾಧಾಕೃಷ್ಣರವರುಗಳನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here