ಗೋಳಿತ್ತೊಟ್ಟು: ಕೃಷಿ ಪಂಪುಸೆಟ್ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಶಿಬಿರ

0

ನೆಲ್ಯಾಡಿ: ಮೆಸ್ಕಾಂ ಉಪ್ಪಿನಂಗಡಿ ಶಾಖೆ ವತಿಯಿಂದ ರೈತರ ಕೃಷಿ ಪಂಪುಸೆಟ್ ಆರ್‌ಆರ್ ನಂಬರ್‌ಗೆ ಆಧಾರ್ ನಂಬರ್ ಜೋಡಣೆ ಶಿಬಿರ ಆ.17ರಂದು ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ನಡೆಯಿತು.
ಗೋಳಿತ್ತೊಟ್ಟು, ಆಲಂತಾಯ, ಮೇಲೂರು, ಶಾಂತಿನಗರ, ಬಜತ್ತೂರು ಗ್ರಾಮದ ಕೃಷಿ ಪಂಪುಸೆಟ್ ಬಳಕೆದಾರರು ಇದರ ಪ್ರಯೋಜನ ಪಡೆದುಕೊಂಡರು. ಉಪ್ಪಿನಂಗಡಿ ಶಾಖೆ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್, ಮೇಲ್ವಿಚಾರಕಿ ಮಿನಿ ಪಿಸಿ, ಸವಿತಾ, ಕಮಲಾಕ್ಷಿ, ದುರ್ಗಾಸಿಂಗ್, ದೀಪ್ತಿಯವರು ಆಧಾರ್ ಜೋಡಣೆ ನಡೆಸಿಕೊಟ್ಟರು. ಗೋಳಿತ್ತೊಟ್ಟು ಬಳಕೆದಾರರ ವೇದಿಕೆ ಕಾರ್ಯದರ್ಶಿ ಕೊರಗಪ್ಪ ಗೌಡ ಕಲ್ಲಡ್ಕ ಸಹಕರಿಸಿದರು.

LEAVE A REPLY

Please enter your comment!
Please enter your name here