ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಮಾಹಿತಿ ಕಾರ್ಯಾಗಾರ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಮಾಹಿತಿ ಕಾರ್ಯಾಗಾರ ಆ.17ರಂದು ನಡೆಯಿತು.


ನಿವೃತ್ತ ಪ್ರಾಂಶುಪಾಲ ಎಮ್.ಸತೀಶ್ ಭಟ್ ಅವರು ಅತ್ಯುತ್ತಮ ಶಿಕ್ಷಕರಾಗುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕರು ತರಗತಿಗೆ ಪ್ರವೇಶಿಸುವುದರಿಂದ ಪ್ರಾರಂಭಿಸಿ ಮನೆಗೆ ತೆರಳುವವರೆಗೆ ಒಬ್ಬ ಶಿಕ್ಷಕನ ಕಾರ್ಯ ಏನು ಎಂಬುದರ ಬಗ್ಗೆ ಅರಿವು ಮೂಡಿಸಿದರು. ಒಬ್ಬ ವ್ಯಕ್ತಿಯು ಸಣ್ಣ ಸಣ್ಣ ಅನುಭವಗಳಿಂದ ಕಲಿಯುತ್ತಾ ಹೋದರೆ ಮಾತ್ರ ತನ್ನ ಅಭಿವೃದ್ಧಿಯತ್ತ ಹೆಜ್ಜೆ ಹಾಕಬಹುದು. ಆಗ ಮಾತ್ರ ಒಬ್ಬ ಅತ್ಯುತ್ತಮ ಶಿಕ್ಷಕನಾಗಲು ಸಾಧ್ಯ ಎಂದು ಹೇಳಿದರು. ಪ್ರಾಂಶುಪಾಲ ಪ್ರವಿದ್ ಪಿ., ಸ್ವಾಗತಿಸಿದರು. ಸಹಶಿಕ್ಷಕಿ ರಜನಿ ವಂದಿಸಿದರು.

LEAVE A REPLY

Please enter your comment!
Please enter your name here