ನೆಲ್ಯಾಡಿ: ಕಾಡಾನೆ ದಾಳಿ-ಕೃಷಿ ಹಾನಿ

0

ನೆಲ್ಯಾಡಿ: ಇಲ್ಲಿಗೆ ಸಮೀಪದ ಬಲ್ಯ ರಸ್ತೆಯ ಪಕ್ಕದಲ್ಲಿ ಇರುವ ಕೃಷಿ ತೋಟವೊಂದಕ್ಕೆ ಆ.18ರಂದು ರಾತ್ರಿ ಕಾಡಾನೆಯೊಂದು ಲಗ್ಗೆ ಇಟ್ಟು ಅಪಾರ ಪ್ರಮಾಣದ ಕೃಷಿ ಹಾನಿ ಮಾಡಿದ ಘಟನೆ ನಡೆದಿದೆ.


ಸತೀಶ್ ಕೆ.ಎಸ್ ದುರ್ಗಾಶ್ರೀ ಅವರ ಕೃಷಿ ತೋಟಕ್ಕೆ ದಾಳಿ ನಡೆಸಿದ ಕಾಡಾನೆ ಸುಮಾರು 20 ವರ್ಷ ಹಳೆಯದಾದ ತೆಂಗಿನ ಮರ ಹಾಗೂ ಅಡಿಕೆ ಗಿಡಗಳನ್ನು ನಾಶ ಮಾಡಿದ್ದು ಅಪಾರ ಪ್ರಮಾಣದ ಕೃಷಿ ಹಾನಿಯಾಗಿದೆ. ಈ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ಆಗಾಗ ನಡೆಯುತ್ತಿದ್ದು, ಕಳೆದ 15 ದಿನಗಳ ಹಿಂದೆ ರಸ್ತೆಯಲ್ಲಿ ಕಾಡಾನೆಯೊಂದು ಸಂಚರಿಸಿ ವಾಹನ ಸವಾರರು ಪರದಾಡಿದ ಘಟನೆ ನಡೆದಿತ್ತು. ಅರಣ್ಯ ಇಲಾಖೆಯವರು ಆನೆ ಕಂದಕಗಳನ್ನು ನಿರ್ಮಿಸಿದ್ದು ಇದೀಗ ವಿಪರೀತ ಮಳೆಯಿಂದಾಗಿ ಆನೆಕಂದಕಗಳು ನೀರು ನುಗ್ಗಿದ ಪರಿಣಾಮ ಹಾನಿಗೊಂಡಿರುವುದರಿಂದ ಆನೆ ಸಂಚಾರಕ್ಕೆ ಸುಗಮವಾಗಿದೆ. ತಕ್ಷಣ ಆನೆ ಕಂದಗಳನ್ನು ಪುನ: ನಿರ್ಮಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here