‌ವಿವೇಕಾನಂದ ಕಾಲೇಜಿನಲ್ಲಿ ರಕ್ಷಾಬಂಧನ – ರಸಚಿಂತನ ಕಾರ್ಯಕ್ರಮ

0

ಹಿಂದೂಗಳಲ್ಲಿ ಸಂಘಟಿತ ಪ್ರಯತ್ನಗಳು ಜಾಗೃತವಾಗಬೇಕು ಎಮ್‌. ವೆಂಕಟ್ರಮಣ ರಾವ್

ಪತ್ರಿಕಾ ಮಿತ್ರರೊಂದಿಗೆ ರಕ್ಷಾ ಬಂಧನ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಭವನದಲ್ಲಿ ರಕ್ಷಾಬಂಧನದ ʼರಸಚಿಂತನʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ವಿದ್ಯಾಭಾರತಿ ಕರ್ನಾಟಕ ಕ್ಷೇತ್ರೀಯ ನೈತಿಕ ಆಧ್ಯಾತ್ಮಿಕ ಪ್ರಮುಖ್‌ ಎಮ್‌. ವೆಂಕಟ್ರಮಣ ರಾವ್‌ ಭಾಗವಹಿಸಿ” ಭಾರತವನ್ನು ವಿಶ್ವಗುರುವನ್ನಾಗಿಸಲು ಬೇಕಾದ ಚೈತನ್ಯವನ್ನು ತುಂಬಲು, ಹಿಂದುತ್ವವನ್ನು ಉಳಿಸಲು ಬೇಕಾದ ಭಾವವನ್ನು ಜಾಗೃತಗೊಳಿಸುವ ಸಂಕಲ್ಪದೊಂದಿಗೆ ನಾವು ಇಂದು ರಕ್ಷೆಯನ್ನು ಕಟ್ಟಬೇಕಿದೆ. ಭಾರತೀಯರಾದ ನಾವೆಲ್ಲರೂ ಒಂದೇ ದಾರದ ಸೂತ್ರದಲ್ಲಿ ನಮ್ಮನ್ನು ಬಂಧಿಸಿಕೊಂಡು,  ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ವಸ್ತುಗಳ ಬಳಕೆ, ಸ್ವಭಾಷಾ ಪ್ರೇಮ, ಭಾರತೀಯ ವೇಷಭೂಷಣ ಈ ವಿಚಾರಗಳನ್ನು ನಾವು ದೈನಂದಿನ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡಾಗ ವಿಕಸಿತ ಭಾರತವನ್ನು ಕಾಣುವಲ್ಲಿ ನಾವು ಸಫಲರಾಗುತ್ತೇವೆ” ಎಂದರು.

ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲದೇವಿಚರಣ್‌ರೈ ಹಾಗೂ ವಿದ್ಯಾರ್ಥಿ  ಕ್ಷೇಮಪಾಲನಾಧಿಕಾರಿ ಶ್ರೀಧರ್‌ ಶೆಟ್ಟಿಗಾರ್‌ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ದೇವಿಚರಣ್‌ ರೈ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ರೇಷ್ಮಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಧರ್‌ ಶೆಟ್ಟಿಗಾರ್‌ ವಂದಿಸಿದರು.

ಪತ್ರಿಕಾ ಮಿತ್ರರೊಂದಿಗೆ ರಕ್ಷಾ ಬಂಧನ
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಪತ್ರಿಕಾ ಕಛೇರಿಗಳಿಗೆ ಹಾಗೂ ಪುತ್ತೂರು ಪ್ರೆಸ್‌ ಕ್ಲಬ್ ಗಳಿಗೆ ಭೇಟಿ ನೀಡಿ ಪತ್ರಿಕಾ ಪತಿನಿಧಿಗಳಿಗೆ ಹಾಗೂ ಕಛೇರಿ ಸಿಬ್ಬಂದಿಗಳಿಗೆ ಪತ್ರಿಕಾ ವಿತರಕರಿಗೆ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನ ಸಂದೇಶವನ್ನು ನೀಡಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಿದರು.

LEAVE A REPLY

Please enter your comment!
Please enter your name here