ದ ಕ ಬಿಜೆಪಿ ನೂತನ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಪುತ್ತೂರು ಬಿಜೆಪಿ ಕಛೇರಿಯಲ್ಲಿ ಸ್ವಾಗತ

0

ಪುತ್ತೂರು: ದಕ್ಷಿಣಕನ್ನಡ ಬಿಜೆಪಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಪ್ರಸನ್ನ ಮಾರ್ತರವರು ಪ್ರಥಮ ಬಾರಿಗೆ ಪುತ್ತೂರು ಬಿಜೆಪಿ ಕಛೇರಿಗೆ ಭೇಟಿ ನೀಡಿದರು,ಅವರಿಗೆ ಮಂಡಲದ ವತಿಯಿಂದ ಗ್ರಾಮಾಂತರ ಮತ್ತು ನಗರ ಮಂಡಲ ಅಧ್ಯಕ್ಷರುಗಳಾದ ಸಾಜ ರಾಧಕೃಷ್ಣ ಆಳ್ವಾ,ಪಿ.ಜಗನ್ನೀವಾಸ ರಾವ್ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿ ಶುಭ ಹಾರೈಸಿದರು.ಇದೇ ಸಂದರ್ಭದಲ್ಲಿ ಡಾ. ಸುರೇಶ್ ಪುತ್ತೂರಾಯರು ಕಛೇರಿಗೆ ಆಗಮಿಸಿ ಅಭಿನಂದಿಸಿದರು.

ಹಿಂದುತ್ವದ ಆಧಾರದಲ್ಲಿ ಪಾರ್ಟಿಗೆ ಶಕ್ತಿ:
ನೂತನ ಉಪಾಧ್ಯಕ್ಷ ಪ್ರಸನ್ನ ಮಾರ್ತರವರು ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ಹಿಂದುತ್ವದ ಆಧಾರದಲ್ಲಿ ಪಾರ್ಟಿಯನ್ನು ಪುತ್ತೂರಿನಲ್ಲಿ ಬಲಪಡಿಸಲು ಒಗ್ಗಟ್ಟಾಗಿ ಕೆಲಸ ಮಾಡುವ ಎಂದು ಹೇಳಿದರು.

ಈ ಸಂದರ್ಭದಲ್ಲಿ  ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ನಿಯೋಜಿತ ಅಧ್ಯಕ್ಷರಾದ ಶಿವಕುಮಾರ್ ಮತ್ತು ದಯಾನಂದ ಶೆಟ್ಟಿಯವರು ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ,ಹಾಗೂ ಉಪಾಧ್ಯಕ್ಷರಾಗಿ ನಿಯೋಜಿತರಾಗಿರುವ ಹರಿಪ್ರಸಾದ್ ಯಾದವ್,ಯುವರಾಜ್ ಪೆರಿಯತ್ತೋಡಿ,ಪ್ರಧಾನಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ,ಜಯಶ್ರೀ ಶೆಟ್ಟಿ,ನಿಯೋಜಿತ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕೋಡಿಬೈಲು,ಅನಿಲ್ ತೆಂಕಿಲ,ಕಾರ್ಯದರ್ಶಿಯಾಗಿ ನಿಯೋಜಿತರಾಗಿರುವ ಪುನೀತ್ ಮಾಡತ್ತಾರು,ನಗರಸಭಾ ಸದಸ್ಯರಾದ ಶಶಿಕಲಾ, ಯುವಮೋರ್ಚ ನಗರ ಅಧ್ಯಕ್ಷರಾದ ನಿತೇಶ್ ಗೋವರ್ಧನ್ ನಗರ, ರೈತಮೋರ್ಚ ಅಧ್ಯಕ್ಷರಾದ ಸುರೇಶ್ ಕಣ್ಣರಾಯ ,ಮಹಾಬಲ ರೈ,ಶರತ್ ಚಂದ್ರ ಬೈಪಡಿತ್ತಾಯ,ಜಯರಾಮ ವರ್ಮ,ಮಹಾಲಿಂಗ ಪಾಟಾಳಿ,ಜಿಲ್ಲಾ ರೈತಮೋರ್ಚ ಕಿಶೋರ್ ಬೇರಿಕೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here