ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ : ಇಂದ್ರಪ್ರಸ್ಥ ದ್ವಿತೀಯ

0

ಉಪ್ಪಿನಂಗಡಿ : ಸಾರ್ವಜನಿಕ ಶಿಕ್ಷಣ ಇಲಾಕೆಯ ವತಿಯಿಂದ ಆಗಸ್ಟ್ 28ರಂದು ಶಾಂತಿಗಿರಿ ವಿದ್ಯಾನಿಕೇತನ ಶಾಲೆಪಂಜಳ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.

ಈ ತಂಡದಲ್ಲಿ 6ನೇ ತರಗತಿಯ ವಿದ್ಯಾರ್ಥಿಗಳಾದ ವಂಶಿ, ಸಹನ್ ಕೆ.ಎಸ್, ಪ್ರಣಿತ್ ರವಿ, ಅನ್ಶುಲ್ ಶೆಟ್ಟಿ, ಧನ್ವಿತ್ ಶೆಟ್ಟಿ, ಅದ್ವೈತ್ ಎ.ಕೆ, 7ನೇ ತರಗತಿಯ ವಿದ್ಯಾರ್ಥಿಗಳಾದ ಶಿಶಿರ್ ಜೆ ಸಾಲಿಯಾನ್, ಕೆ. ಅತುಲ್ ನಾಯಕ್, ವಚನ್ ಕನ್ಯಾನ, ಮೊಹಮ್ಮದ್ ಇರಾಝ್, ಆಕಾಂಕ್ಷ್ ಜೆ, ಮೊಹಮ್ಮದ್ ನಶಾ, ಭಾಗವಹಿಸಿರುತ್ತಾರೆ. 6ನೇ ತರಗತಿಯ ವಂಶಿ ಸವ್ಯಸಾಚಿ ಆಟಗಾರನಾಗಿ ಹಾಗು 8ನೇ ತರಗತಿಯ ಆಯತ್ತಲ್ಲಾ ಸಲೀಂ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.


ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯರಾದ ವಿದ್ಯಾ ,ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here