ಬನ್ನೂರು: ತೋಟದಲ್ಲಿ ಅಸ್ವಸ್ಥಗೊಂಡಿದ್ದ ನವಿಲು-ಸೂಕ್ತ ಚಿಕಿತ್ಸೆ ಕೊಡಿಸಿ ರಕ್ಷಣೆ

0

ಪುತ್ತೂರು: ಬನ್ನೂರು ನೀರ್ಪಾಜೆ ಅಡಿಕೆ ತೋಟವೊಂದರಲ್ಲಿ ಅಸ್ವಸ್ಥಗೊಂಡಿದ್ದ ನವಿಲನ್ನು ಪುತ್ತೂರು ಪಶು ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಆ.30ರಂದು ನಡೆದಿದೆ.

ಬನ್ನೂರು ನೀರ್ಪಾಜೆ ಅವಿನಾಶ್ ಅವರ ಅಡಿಕೆ ತೋಟದಲ್ಲಿ ನವಿಲೊಂದು ಅಸ್ವಸ್ಥಗೊಂಡು ಬಿದ್ದಿರುದನ್ನು ಗಮನಿಸಿದ ಮೋಹನ ಎಂಬವರು ರತ್ನಾಕರ ಎಂಬವರ ಆಟೋ ರಿಕ್ಷಾದಲ್ಲಿ ಪುತ್ತೂರು ಪಶು ಆಸ್ಪತ್ರೆಗೆ ಕೊಂಡೊಯ್ದು ನವಿಲಿಗೆ ಚಿಕಿತ್ಸೆ ಕೊಡಿಸುವ ಮೂಲಕ ನವಿಲನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಪಶು ಆಸ್ಪತ್ರೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆಗಮಿಸಿ ನವಿಲನ್ನು ತಮ್ಮ ಸುಪರ್ದಿಗೆ ಪಡೆದು ಆರೈಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here