ಸೆ.2ಕ್ಕೆ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ವಿಷ್ಣುರವರ ಅನುವಾದಿತ ಪುಸ್ತಕ ಬಿಡುಗಡೆ

0

ಪುತ್ತೂರು: ಡಾ.ಕೆ.ವಿಷ್ಣುರವರು ಕನ್ನಡಕ್ಕೆ ಅನುವಾದ ಮಾಡಿದ ಮಾಂಡೂಕ್ಯೋಪನಿಷದ್ – ಗೌಡಪಾದಕಾರಿಕಾ ಪುಸ್ತಕ ಮತ್ತು ಅದ್ವೈತ ಮತ್ತು ಇತರ ಹತ್ತು ಲೇಖನಗಳ ಬಿಡುಗಡೆ ಸಮಾರಂಭ ಸೆ.2ರಂದು ಸಂಜೆ ಗಂಟೆ 6ಕ್ಕೆ ರೋಟರಿ ಮನೀಷಾ ಸಭಾಂಗಣದಲ್ಲಿ ಜರುಗಲಿದೆ.


ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ನೇತೃತ್ವದಲ್ಲಿ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷ ಡಾ. ರವಿಪ್ರಕಾಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಂಡೊಕ್ಯೋಪನಿಷದ್ -ಗೌಡಪಾದಕಾರಿಕಾ( ಕನ್ನಡ ಭಾಷಾಂತರ) ಪುಸ್ತಕ ಬಿಡುಗಡೆಯನ್ನು ಹಿರಿಯ ಸಾಹಿತಿ ಪ್ರೊ|| ವಿ.ಬಿ.ಅರ್ತಿಕಜೆ ಮತ್ತು ಅದ್ವೇತ ಮತ್ತು ಇತರ ಹತ್ತು ಲೇಖನಗಳು ಪುಸ್ತಕವನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ| ಡಾ. ಎನ್. ಪರಮೇಶ್ವರ ಭಟ್ ಅವರು ಬಿಡುಗಡೆಗೊಳಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಡಾ.ಕೆ.ವಿಷ್ಣು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here