ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ ಕಾಲೇಜಿನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಮುಕ್ರಂಪಾಡಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜ್‌ನಲ್ಲಿ ಆ.27 ರಂದು ವಾಣಿಜ್ಯಶಾಸ್ತ್ರದಲ್ಲಿ ಉಪನ್ಯಾಸಕಿಯಾಗಿದ್ದ ಜಯಂತಿ ಬಿ ಇವರಿಗೆ ಬೀಳ್ಕೊಡುಗೆ ಕಾಠ್ಯಕ್ರಮ ನಡೆಯಿತು.

ಇವರು ಸೇವೆಯಲ್ಲಿ ಸ್ವಯಂ ನಿವೃತ್ತಿಯಾದ ನಂತರವೂ ನಿಸ್ವಾರ್ಥವಾಗಿ ಯಾವುದೇ ವೇತನರಹಿತವಾಗಿ ಹಲವಾರು ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದರು. ಸಭಾ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು. ಕಾಣಿಯೂರಿನ ಪ್ರಾಂಶುಪಾಲೆ ಜಯಂತಿ ಕೆ, ಉಪನ್ಯಾಸಕಿ ಚಿತ್ರಲೇಖ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಿ ನಿರ್ಮಾಲ ಎನ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರಸನ್ನ ಸ್ವಾಗತಿಸಿದರು. ಜಯಲಕ್ಷ್ಮಿ ಕೆ ವಂದಿಸಿದರು. ಬೋಧಕ ಬೋಧಕೇತರ ವೃಂದ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ತದನಂತರ ವಿದ್ಯಾರ್ಥಿನಿಯರಿಂದ “ಬಾಲಿಕ ಪ್ರತಿಭಾ ಹಂಟ್ 2024” ಪ್ರಯುಕ್ತ ವಿಭಾಗವಾರು ಸಾಂಸ್ಕೃತಿಕ ಕಾಠ್ಯಕ್ರಮಗಳು ನಡೆಯಿತು.

LEAVE A REPLY

Please enter your comment!
Please enter your name here