ಕೈಲಾರ್ ಮಹಾಲಿಂಗ ಭಟ್ ನಿಧನ

0

ಉಪ್ಪಿನಂಗಡಿ : ನೇತ್ರಾವತಿ ಟ್ರಾವೆಲ್ಸ್, ನೇತ್ರಾವತಿ ಹಣಕಾಸು ಸಂಸ್ಥೆಗಳನ್ನು ಒಳಗೊಂಡ ನೇತ್ರಾವತಿ ಸಮೂಹ ಸಂಸ್ಥೆಗಳ ಮಾಲಕರಾಗಿದ್ದ ಕೈಲಾರ್ ಮಹಾಲಿಂಗ ಭಟ್ (66) (KAILAR MAHALINGA BHAT) ಆದಿತ್ಯವಾರದಂದು ಉಪ್ಪಿನಂಗಡಿಯ (Uppinangady) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಸಾಮಾಜಿಕ ಕಾರ್ಯಕ್ಷೇತ್ರದಲ್ಲೂ ಮುಂಚೂಣಿ ಕಾರ್ಯಕರ್ತರಾಗಿದ್ದ ಇವರು, ಉಪ್ಪಿನಂಗಡಿಯನ್ನು ಕೇಂದ್ರೀಕರಿಸಿ ಹಲವು ಬಸ್ಸುಗಳ ಮಾಲಕರಾಗಿ, ಹಣಕಾಸು ಸಂಸ್ಥೆಯ ಮಾಲಕರಾಗಿ ಯಶಸ್ವಿ ಉದ್ಯಮಿ ಎಂದು ಪರಿಗಣಿಸಲ್ಪಟ್ಟಿದ್ದರು. ಬದಲಾದ ಕಾಲಘಟ್ಟದಲ್ಲಿ ಉದ್ಯಮ ಕ್ಷೇತ್ರದಿಂದ ವಿಮುಖರಾಗಿ ಮಂಗಳೂರಿನಲ್ಲಿ ವಾಸ್ತವ್ಯವನ್ನು ಹೊಂದಿದ್ದ ಇವರು, ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದಾಗ ಮೆದುಳಿನಲ್ಲಿ ತೀವ್ರ ತರಹದ ರಕ್ತಸ್ರಾವಕ್ಕೆ ತುತ್ತಾಗಿ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು. ಮೃತರು ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here