ಮೃತ ಭೂಮಾಪಕರ ಕುಟುಂಬಕ್ಕೆ ನೆರವಿನ ಹಸ್ತ

0

ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಹುಟ್ಟು ಹಬ್ಬದ ಪ್ರಯುಕ್ತ ಇತ್ತೀಚೆಗೆ ಹೃದಾಯಾಘಾತದಿಂದ ನಿಧನರಾದ ಬೆಳ್ತಂಗಡಿ ತಾಲೂಕಿನಲ್ಲಿ ಪರವಾನಗಿ ಭೂಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಶ್ವನಾಥ್ ರಾವ್ ಇವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.


ಕುಟುಂಬಕ್ಕೆ ಡಿಡಿಎಲ್‌ಆರ್ ಮಂಗಳೂರು ಎ ಡಿ ಎಲ್ ಆರ್ ಪುತ್ತೂರು ಮತ್ತು ಪರ್ಯವೇಕ್ಷಕರು ಪುತ್ತೂರು ಎಲ್ಲಾ ಭೂಮಾಪಕರು ಕಡಬ ಎಲ್ಲಾ ಭೂಮಾಪಕರು ಸೇರಿದಂತೆ ಸಂಗ್ರಹಿಸಲಾದ ಮೊತ್ತವನ್ನು ವಿಶ್ವನಾಥ್ ರಾವ್ ಪತ್ನಿ ಚೈತ್ರಶ್ರೀ ಮಗ ಪರಿಣಿತ್ ರವರಿಗೆ ಶಾಸಕರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುಮಾ ಅಶೋಕ್ ರೈ ,ಕೆಪಿಸಿಸಿ ಸಂಯೋಜಕರಾದ ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ರೈ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here